<p><strong>ಗದಗ:</strong> ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸಹಕಾರ ಸಂಘ ಸ್ಥಾಪಿಸಿ, ದೇಶಕ್ಕೆ ಕೀರ್ತಿ ತಂದ ಸಹಕಾರ ರಂಗದ ಪಿತಾಮಹ ಕಣಗಿನಹಾಳದ ಯಜಮಾನರಾದ ಸಿದ್ಧನಗೌಡ ಪಾಟೀಲ ಅವರ ಹೆಸರನ್ನು ನವೀಕೃತಗೊಂಡ ಗದಗ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಹಾಲುಮತ ಮಹಾಸಭಾದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ‘1905ರಲ್ಲಿ ಬ್ರಿಟಿಷರು ಸಹಕಾರ ಸಂಘವನ್ನು ಸ್ಥಾಪಿಸಲು ಹಲವಾರು ಜನರನ್ನು ಸಂಪರ್ಕಿಸಿದಾಗ ಯಾರೂ ಮುಂದೆ ಬರಲಿಲ್ಲ. ಆಗ ಕಣಗಿನಹಾಳ ಗ್ರಾಮದ ಸಿದ್ದನಗೌಡ ಪಾಟೀಲ ಅವರು ಮುಂದೆ ಬಂದರು. ಜತೆಗೆ ಗ್ರಾಮಸ್ಥರ ಪರವಾಗಿ ಮೂರು ಬೇಡಿಕೆಗಳನ್ನು ಇಟ್ಟು, ಅವುಗಳನ್ನು ಈಡೇರಿಸಿದರೆ ಸಹಕಾರ ಸಂಘ ಸ್ಥಾಪನೆಯ ಭರವಸೆ ನೀಡಿದರು’ ಎಂದರು.</p>.<p>ಅದರಂತೆ, ಕಣಗಿನಹಾಳ ಗ್ರಾಮಕ್ಕೆ ರೈಲು ನಿಲ್ದಾಣ, ಗ್ರಾಮದಲ್ಲಿ ಸರ್ಕಾರಿ ಶಾಲೆ ಸ್ಥಾಪನೆ ಹಾಗೂ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಒಂದು ಬಾವಿಯನ್ನು ನಿರ್ಮಿಸಲಾಯಿತು. ಬಳಿಕ ಸಿದ್ದನಗೌಡ ಪಾಟೀಲರು ಮೇ 8ರಂದು ಪ್ರಥಮ ಸಹಕಾರ ಸಂಘದ ನೋಂದಣಿ ಮಾಡಿಸಿದರು’ ಎಂದರು.</p>.<p>‘ಅಂದಿನ ದಿನಗಳಲ್ಲಿ ₹2 ಸಾವಿರ ಠೇವಣಿ ಇಟ್ಟು ಸಂಘವನ್ನು ಸ್ಥಾಪಿಸಿ ಸಹಕಾರ ರಂಗಕ್ಕೆ ಮುನ್ನುಡಿ ಬರೆದಿದ್ದು ಇತಿಹಾಸ. ಅಂತಹ ಮಹನೀಯರ ಹೆಸರನ್ನು ಶಾಶ್ವತವಾಗಿರಿಸಲು ಹಾಗೂ ಅವರ ಸಾಧನೆಗಳನ್ನು ಜನರಿಗೆ ಪರಿಚಯಿಸಲು ನವೀಕೃತಗೊಂಡ ರೈಲು ನಿಲ್ದಾಣಕ್ಕೆ ಸಿದ್ದನಗೌಡ ಪಾಟೀಲ ಅವರ ಹೆಸರನ್ನು ಇಡುವುದು ಸೂಕ್ತ’ ಎಂದು ತಿಳಿಸಿದರು.</p>.<p>ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಮುತ್ತು ಜಡಿ ಪದಾಧಿಕಾರಿಗಳಾದ ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ ಕುರುಬರ ಸಂಘ ಯುವ ಘಟಕದ ಅಧ್ಯಕ್ಷ ಮಂಜುನಾಥ ಜಡಿ, ಮುತ್ತು ಮುಶಿಗೇರಿ, ಹಿಂದುಳಿದ ವರ್ಗಗಳ ಮೋರ್ಚಾದ ಗದಗ ತಾಲ್ಲೂಕು ಅಧ್ಯಕ್ಷ ರವಿ ವಗ್ಗನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸಹಕಾರ ಸಂಘ ಸ್ಥಾಪಿಸಿ, ದೇಶಕ್ಕೆ ಕೀರ್ತಿ ತಂದ ಸಹಕಾರ ರಂಗದ ಪಿತಾಮಹ ಕಣಗಿನಹಾಳದ ಯಜಮಾನರಾದ ಸಿದ್ಧನಗೌಡ ಪಾಟೀಲ ಅವರ ಹೆಸರನ್ನು ನವೀಕೃತಗೊಂಡ ಗದಗ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಹಾಲುಮತ ಮಹಾಸಭಾದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ‘1905ರಲ್ಲಿ ಬ್ರಿಟಿಷರು ಸಹಕಾರ ಸಂಘವನ್ನು ಸ್ಥಾಪಿಸಲು ಹಲವಾರು ಜನರನ್ನು ಸಂಪರ್ಕಿಸಿದಾಗ ಯಾರೂ ಮುಂದೆ ಬರಲಿಲ್ಲ. ಆಗ ಕಣಗಿನಹಾಳ ಗ್ರಾಮದ ಸಿದ್ದನಗೌಡ ಪಾಟೀಲ ಅವರು ಮುಂದೆ ಬಂದರು. ಜತೆಗೆ ಗ್ರಾಮಸ್ಥರ ಪರವಾಗಿ ಮೂರು ಬೇಡಿಕೆಗಳನ್ನು ಇಟ್ಟು, ಅವುಗಳನ್ನು ಈಡೇರಿಸಿದರೆ ಸಹಕಾರ ಸಂಘ ಸ್ಥಾಪನೆಯ ಭರವಸೆ ನೀಡಿದರು’ ಎಂದರು.</p>.<p>ಅದರಂತೆ, ಕಣಗಿನಹಾಳ ಗ್ರಾಮಕ್ಕೆ ರೈಲು ನಿಲ್ದಾಣ, ಗ್ರಾಮದಲ್ಲಿ ಸರ್ಕಾರಿ ಶಾಲೆ ಸ್ಥಾಪನೆ ಹಾಗೂ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಒಂದು ಬಾವಿಯನ್ನು ನಿರ್ಮಿಸಲಾಯಿತು. ಬಳಿಕ ಸಿದ್ದನಗೌಡ ಪಾಟೀಲರು ಮೇ 8ರಂದು ಪ್ರಥಮ ಸಹಕಾರ ಸಂಘದ ನೋಂದಣಿ ಮಾಡಿಸಿದರು’ ಎಂದರು.</p>.<p>‘ಅಂದಿನ ದಿನಗಳಲ್ಲಿ ₹2 ಸಾವಿರ ಠೇವಣಿ ಇಟ್ಟು ಸಂಘವನ್ನು ಸ್ಥಾಪಿಸಿ ಸಹಕಾರ ರಂಗಕ್ಕೆ ಮುನ್ನುಡಿ ಬರೆದಿದ್ದು ಇತಿಹಾಸ. ಅಂತಹ ಮಹನೀಯರ ಹೆಸರನ್ನು ಶಾಶ್ವತವಾಗಿರಿಸಲು ಹಾಗೂ ಅವರ ಸಾಧನೆಗಳನ್ನು ಜನರಿಗೆ ಪರಿಚಯಿಸಲು ನವೀಕೃತಗೊಂಡ ರೈಲು ನಿಲ್ದಾಣಕ್ಕೆ ಸಿದ್ದನಗೌಡ ಪಾಟೀಲ ಅವರ ಹೆಸರನ್ನು ಇಡುವುದು ಸೂಕ್ತ’ ಎಂದು ತಿಳಿಸಿದರು.</p>.<p>ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಮುತ್ತು ಜಡಿ ಪದಾಧಿಕಾರಿಗಳಾದ ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ ಕುರುಬರ ಸಂಘ ಯುವ ಘಟಕದ ಅಧ್ಯಕ್ಷ ಮಂಜುನಾಥ ಜಡಿ, ಮುತ್ತು ಮುಶಿಗೇರಿ, ಹಿಂದುಳಿದ ವರ್ಗಗಳ ಮೋರ್ಚಾದ ಗದಗ ತಾಲ್ಲೂಕು ಅಧ್ಯಕ್ಷ ರವಿ ವಗ್ಗನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>