ಕೃಷಿ ಹೊಲವು ಕಣಿವೆಯಾಗಿ ಪರಿವರ್ತನೆಯಾಗಿದೆ. ಆದರೆ ಇದರ ಸುತ್ತ ಎಲ್ಲಿಯೂ ತಂತಿ ಬೇಲಿಯನ್ನು ಸಹ ಹಾಕಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಹೊಲದ ಮಾಲೀಕರು, ಅನುಮತಿ ನೀಡಿದ ಅಧಿಕಾರಿಗಳು, ಗರಸು ತುಂಬಿಕೊಂಡು ಹೋದ ಖಾಸಗಿಯವರು ಸಹ ಕೈಗೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅನುಮತಿ ಕುರಿತು ಪರಿಶೀಲನೆ ನಡೆಸಬೇಕು ಎಂದು ಜೈ ಭೀಮ ಸೇನಾ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ ಆಗ್ರಹಿಸಿದರು.