<p><strong>ಗದಗ:</strong> ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ. ಟಿ.ಎಂ.ಕೇಶವ ಅವರು ಶುಕ್ರವಾರ ನಿಧನರಾದ ಹಿನ್ನೆಲೆಯಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ಲಕ್ಕುಂಡಿ ಉತ್ಖನನದ ಸಹ ನಿರ್ದೇಶಕ ಡಾ. ಶೈಜೇಶ್ವರ ಮಾತನಾಡಿ, ‘ಉತ್ಖನನ ಹಾಗೂ ಪ್ರಾಚ್ಯವಸ್ತುಗಳ ಕುರಿತಾಗಿ ಅಪಾರ ಜ್ಞಾನ ಹೊಂದಿದ್ದ ಡಾ. ಟಿ.ಎಂ.ಕೇಶವ ಅವರ ನಿಧನದಿಂದ ನಾಡಿಗೆ ದೊಡ್ಡ ನಷ್ಟವಾಗಿದೆ’ ಎಂದು ಹೇಳಿದರು.</p>.<p>‘ಡಾ. ಟಿ.ಎಂ.ಕೇಶವ ಅವರು ತಾಂತ್ರಿಕ ಸಹಾಯಕರಾಗಿ ಪುರಾತತ್ವ ಇಲಾಖೆಗೆ ಸೇರಿ ಸಾಕಷ್ಟು ಮಹತ್ವದ ಕೆಲಸಗಳನ್ನು ಮಾಡಿ ಪುರಾತತ್ವ ಇಲಾಖೆಯ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಇಲಾಖೆ ಸೇರಿದ ಪ್ರಥಮದಲ್ಲಿ ಅವರು ಅಜಂತಾ, ಎಲ್ಲೋರಾದಲ್ಲಿ ಉತ್ತಮ ಕೆಲಸ ಮಾಡಿದ್ದರು’ ಎಂದರು.</p>.<p>‘ಡಾ. ಟಿ.ಎಂ.ಕೇಶವ ಅವರ ಮನಸ್ಸು ಸದಾ ಕನ್ನಡ ನಾಡಿನತ್ತ ತುಡಿಯುತ್ತಿತ್ತು. ಅಜಂತಾದಿಂದ ಅವರು ಹಂಪಿಗೆ ಬಂದು ಸತತ 20 ವರ್ಷಗಳ ಕಾಲ ಇತಿಹಾಸವೇ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡಿದರು’ ಎಂದು ಹೇಳಿದರು.</p>.<p>‘ಹಂಪಿಯಲ್ಲಿ ಸಾಕಷ್ಟು ಉತ್ಖನನ ನಡೆಸಿದರು. ಕೃಷ್ಣದೇವರಾಯನ ಅರಮನೆ ಪತ್ತೆ ಮಾಡಿದರು. ಹಂಪಿ ಹಾಳಾಗಲು ಏನು ಕಾರಣ ಎಂಬುದರ ಬಗ್ಗೆ ಇತಿಹಾಸವನ್ನು ಅಧ್ಯಯನ ಮಾಡಿ ಕರಾರುವಾಕ್ಕಾಗಿ ಲೇಖನಗಳನ್ನು ಬರೆದರು. ವಿರುಪಾಕ್ಷ ಬಜಾರ್ ಹಾಗೂ ಹಂಪಿಯಲ್ಲಿರುವ ವಸ್ತುಸಂಗ್ರಹಾಲಯ ಇಷ್ಟು ವ್ಯವಸ್ಥಿತವಾಗಿರಲು ಅವರೇ ಪ್ರಮುಖ ಕಾರಣರು’ ಎಂದು ಹೇಳಿದರು.</p>.<p>‘ರವಿವರ್ಮನ ಶಾಸನದಲ್ಲಿ ಮನ್ಮಥನ ಹೊಂಡದ ಬಗ್ಗೆ ಉಲ್ಲೇಖ ಇತ್ತು. ಅದರಂತೆ ಗುಡ್ನಾಪುರದಲ್ಲಿ ಉತ್ಖನನ ನಡೆಸಿದಾಗ ಅದರ ಪ್ರಾಚ್ಯ ಅವಶೇಷಗಳು ಪತ್ತೆಯಾದವು. ಅಂತೆಯೇ, ತಾಳಗುಂದದಲ್ಲಿ ಉತ್ಖನನ ನಡೆಸಿದಾಗ ಕರ್ನಾಟಕದ ಅತ್ಯಂತ ಪ್ರಾಚೀನ ದೇವಸ್ಥಾನ ಎನಿಸಿಕೊಂಡಿರುವ ಪ್ರಣವೇಶ್ವರ ದೇವಸ್ಥಾನದ ಬಳಿ ಸಿಂಹಕಟಾಂಜನ ಹಾಗೂ ಒಂದು ಶಾಸನ ಸಿಕ್ಕಿತ್ತು. ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ಹಲ್ಮಿಡಿ ಅಥವಾ ಡಾ. ಟಿ.ಎಂ.ಕೇಶವ ಅವರು ಪತ್ತೆಹಚ್ಚಿದ ಶಾಸನವಾ ಎಂಬುದರ ಬಗ್ಗೆ ವಿದ್ವಾಂಸರ ವಲಯದಲ್ಲಿ ಈಗಲೂ ಚರ್ಚೆಗಳು ನಡೆದಿವೆ. ಇದು ಅವರ ಅತಿದೊಡ್ಡ ಸಾಧನೆಯಾಗಿದೆ’ ಎಂದರು.</p>.<p>ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ಮಾತನಾಡಿ, ‘ಲಕ್ಕುಂಡಿಯಲ್ಲಿ ಉತ್ಖನನ ನಡೆಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಅವರು ನಿರ್ಧರಿಸಿದಾಗ, ಅದರ ನೇತೃತ್ವ ಯಾರು ವಹಿಸಬೇಕು ಎಂಬ ಯೋಚನೆ ಬಂತು. ಆಗ ಎಲ್ಲರೂ ಟಿ.ಎಂ.ಕೇಶವ ಹೆಸರು ಹೇಳಿದರು. ಅವರು ನಾಡಿನ ಹಲವೆಡೆ ಯಶಸ್ವಿಯಾಗಿ ಉತ್ಖನನ ಮಾಡಿದ್ದರು. ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಲು ಒಪ್ಪಿದರು. ಅವರ ನಿಧನದ ವಿಷಯ ತುಂಬಲಾರದ ನಷ್ಟವಾಗಿದೆ’ ಎಂದರು.</p>.<p>ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, ‘ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದಿರುವ ಉತ್ಖನನ ಜಾಗವನ್ನು ನಿಗದಿ ಪಡಿಸಿದ್ದೇ ಟಿ.ಎಂ.ಕೇಶವ ಅವರು. ಇದಕ್ಕಾಗಿ ಅವರು ಸಾಕಷ್ಟು ಅಧ್ಯಯನ ನಡೆಸಿದ್ದರು. ಸಿ.ಎಂ ಸಿದ್ದರಾಮಯ್ಯ ಅವರು ಉತ್ಖನನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಲಕ್ಕುಂಡಿ ಬಗ್ಗೆ ಅವರಿಗೆ ಸವಿಸ್ತಾರ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.</p>.<p>ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಉತ್ಖನನ ನಡೆಸುವ ಕಾರ್ಮಿಕರು, ಗ್ರಾಮಸ್ಥರು ಭಾಗವಹಿಸಿದ್ದರು.</p>.<p> <strong>ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳ ಭೇಟಿ</strong> </p><p>ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮದಲ್ಲಿರುವ ನಾಗಕಂಡು ಬಾವಿ ಸಂರಕ್ಷಣೆಯಲ್ಲಿ ತೊಡಗಿರುವ ಹೈದರಾಬಾದ್ ಮೂಲಕ ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳು ಶನಿವಾರ ಲಕ್ಕುಂಡಿಗೆ ಭೇಟಿ ನೀಡಿದ್ದರು. ‘ಲಕ್ಕುಂಡಿಯಲ್ಲಿ ನಡೆದಿರುವ ಉತ್ಖನನ ಸ್ಥಳ ವೀಕ್ಷಣೆ ಮಾಡಿದ ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳು ಇಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಯಲು ವಸ್ತುಸಂಗ್ರಾಹಯದ ಡಿಪಿಆರ್ ತಯಾರಿಗೆ ನೆರವಾಗಲಿದ್ದಾರೆ’ ಎಂದು ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. ಗ್ರೀಸ್ನ ಡಾ. ಹೆಲೆನ್ ಮತ್ತು ಅಲೆಕ್ಸಾಂಡರ್ ಇಟಲಿಯ ಸ್ಟೀಫನ್ ಹಾಗೂ ಟ್ರಸ್ಟಿ ವೈಶಾಖ್ ಪ್ರಾಜೆಕ್ಟ್ ಮ್ಯಾನೇಜರ್ ಚರಣ್ ತಂಡದಲ್ಲಿದ್ದರು.</p>.<p><strong>ಶನಿವಾರವೂ ಯಾವುದೇ ಪ್ರಾಚ್ಯ ಅವಶೇಷ ಪತ್ತೆ ಇಲ್ಲ</strong> </p><p>ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಶನಿವಾರ ಯಾವುದೇ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಉತ್ಖನನ ನಡೆಯುತ್ತಿರುವ ಸ್ಥಳದ ಸಮೀಪ ಇರುವ ಸಿದ್ಧರ ಬಾವಿಯಲ್ಲಿ ಮತ್ತೊಂದು ಹಾವು ಗೋಚರಿಸಿದ್ದು ಜನರಲ್ಲಿ ಭೀತಿ ತರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ. ಟಿ.ಎಂ.ಕೇಶವ ಅವರು ಶುಕ್ರವಾರ ನಿಧನರಾದ ಹಿನ್ನೆಲೆಯಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ಲಕ್ಕುಂಡಿ ಉತ್ಖನನದ ಸಹ ನಿರ್ದೇಶಕ ಡಾ. ಶೈಜೇಶ್ವರ ಮಾತನಾಡಿ, ‘ಉತ್ಖನನ ಹಾಗೂ ಪ್ರಾಚ್ಯವಸ್ತುಗಳ ಕುರಿತಾಗಿ ಅಪಾರ ಜ್ಞಾನ ಹೊಂದಿದ್ದ ಡಾ. ಟಿ.ಎಂ.ಕೇಶವ ಅವರ ನಿಧನದಿಂದ ನಾಡಿಗೆ ದೊಡ್ಡ ನಷ್ಟವಾಗಿದೆ’ ಎಂದು ಹೇಳಿದರು.</p>.<p>‘ಡಾ. ಟಿ.ಎಂ.ಕೇಶವ ಅವರು ತಾಂತ್ರಿಕ ಸಹಾಯಕರಾಗಿ ಪುರಾತತ್ವ ಇಲಾಖೆಗೆ ಸೇರಿ ಸಾಕಷ್ಟು ಮಹತ್ವದ ಕೆಲಸಗಳನ್ನು ಮಾಡಿ ಪುರಾತತ್ವ ಇಲಾಖೆಯ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಇಲಾಖೆ ಸೇರಿದ ಪ್ರಥಮದಲ್ಲಿ ಅವರು ಅಜಂತಾ, ಎಲ್ಲೋರಾದಲ್ಲಿ ಉತ್ತಮ ಕೆಲಸ ಮಾಡಿದ್ದರು’ ಎಂದರು.</p>.<p>‘ಡಾ. ಟಿ.ಎಂ.ಕೇಶವ ಅವರ ಮನಸ್ಸು ಸದಾ ಕನ್ನಡ ನಾಡಿನತ್ತ ತುಡಿಯುತ್ತಿತ್ತು. ಅಜಂತಾದಿಂದ ಅವರು ಹಂಪಿಗೆ ಬಂದು ಸತತ 20 ವರ್ಷಗಳ ಕಾಲ ಇತಿಹಾಸವೇ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡಿದರು’ ಎಂದು ಹೇಳಿದರು.</p>.<p>‘ಹಂಪಿಯಲ್ಲಿ ಸಾಕಷ್ಟು ಉತ್ಖನನ ನಡೆಸಿದರು. ಕೃಷ್ಣದೇವರಾಯನ ಅರಮನೆ ಪತ್ತೆ ಮಾಡಿದರು. ಹಂಪಿ ಹಾಳಾಗಲು ಏನು ಕಾರಣ ಎಂಬುದರ ಬಗ್ಗೆ ಇತಿಹಾಸವನ್ನು ಅಧ್ಯಯನ ಮಾಡಿ ಕರಾರುವಾಕ್ಕಾಗಿ ಲೇಖನಗಳನ್ನು ಬರೆದರು. ವಿರುಪಾಕ್ಷ ಬಜಾರ್ ಹಾಗೂ ಹಂಪಿಯಲ್ಲಿರುವ ವಸ್ತುಸಂಗ್ರಹಾಲಯ ಇಷ್ಟು ವ್ಯವಸ್ಥಿತವಾಗಿರಲು ಅವರೇ ಪ್ರಮುಖ ಕಾರಣರು’ ಎಂದು ಹೇಳಿದರು.</p>.<p>‘ರವಿವರ್ಮನ ಶಾಸನದಲ್ಲಿ ಮನ್ಮಥನ ಹೊಂಡದ ಬಗ್ಗೆ ಉಲ್ಲೇಖ ಇತ್ತು. ಅದರಂತೆ ಗುಡ್ನಾಪುರದಲ್ಲಿ ಉತ್ಖನನ ನಡೆಸಿದಾಗ ಅದರ ಪ್ರಾಚ್ಯ ಅವಶೇಷಗಳು ಪತ್ತೆಯಾದವು. ಅಂತೆಯೇ, ತಾಳಗುಂದದಲ್ಲಿ ಉತ್ಖನನ ನಡೆಸಿದಾಗ ಕರ್ನಾಟಕದ ಅತ್ಯಂತ ಪ್ರಾಚೀನ ದೇವಸ್ಥಾನ ಎನಿಸಿಕೊಂಡಿರುವ ಪ್ರಣವೇಶ್ವರ ದೇವಸ್ಥಾನದ ಬಳಿ ಸಿಂಹಕಟಾಂಜನ ಹಾಗೂ ಒಂದು ಶಾಸನ ಸಿಕ್ಕಿತ್ತು. ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ಹಲ್ಮಿಡಿ ಅಥವಾ ಡಾ. ಟಿ.ಎಂ.ಕೇಶವ ಅವರು ಪತ್ತೆಹಚ್ಚಿದ ಶಾಸನವಾ ಎಂಬುದರ ಬಗ್ಗೆ ವಿದ್ವಾಂಸರ ವಲಯದಲ್ಲಿ ಈಗಲೂ ಚರ್ಚೆಗಳು ನಡೆದಿವೆ. ಇದು ಅವರ ಅತಿದೊಡ್ಡ ಸಾಧನೆಯಾಗಿದೆ’ ಎಂದರು.</p>.<p>ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ಮಾತನಾಡಿ, ‘ಲಕ್ಕುಂಡಿಯಲ್ಲಿ ಉತ್ಖನನ ನಡೆಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಅವರು ನಿರ್ಧರಿಸಿದಾಗ, ಅದರ ನೇತೃತ್ವ ಯಾರು ವಹಿಸಬೇಕು ಎಂಬ ಯೋಚನೆ ಬಂತು. ಆಗ ಎಲ್ಲರೂ ಟಿ.ಎಂ.ಕೇಶವ ಹೆಸರು ಹೇಳಿದರು. ಅವರು ನಾಡಿನ ಹಲವೆಡೆ ಯಶಸ್ವಿಯಾಗಿ ಉತ್ಖನನ ಮಾಡಿದ್ದರು. ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಲು ಒಪ್ಪಿದರು. ಅವರ ನಿಧನದ ವಿಷಯ ತುಂಬಲಾರದ ನಷ್ಟವಾಗಿದೆ’ ಎಂದರು.</p>.<p>ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, ‘ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದಿರುವ ಉತ್ಖನನ ಜಾಗವನ್ನು ನಿಗದಿ ಪಡಿಸಿದ್ದೇ ಟಿ.ಎಂ.ಕೇಶವ ಅವರು. ಇದಕ್ಕಾಗಿ ಅವರು ಸಾಕಷ್ಟು ಅಧ್ಯಯನ ನಡೆಸಿದ್ದರು. ಸಿ.ಎಂ ಸಿದ್ದರಾಮಯ್ಯ ಅವರು ಉತ್ಖನನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಲಕ್ಕುಂಡಿ ಬಗ್ಗೆ ಅವರಿಗೆ ಸವಿಸ್ತಾರ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.</p>.<p>ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಉತ್ಖನನ ನಡೆಸುವ ಕಾರ್ಮಿಕರು, ಗ್ರಾಮಸ್ಥರು ಭಾಗವಹಿಸಿದ್ದರು.</p>.<p> <strong>ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳ ಭೇಟಿ</strong> </p><p>ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮದಲ್ಲಿರುವ ನಾಗಕಂಡು ಬಾವಿ ಸಂರಕ್ಷಣೆಯಲ್ಲಿ ತೊಡಗಿರುವ ಹೈದರಾಬಾದ್ ಮೂಲಕ ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳು ಶನಿವಾರ ಲಕ್ಕುಂಡಿಗೆ ಭೇಟಿ ನೀಡಿದ್ದರು. ‘ಲಕ್ಕುಂಡಿಯಲ್ಲಿ ನಡೆದಿರುವ ಉತ್ಖನನ ಸ್ಥಳ ವೀಕ್ಷಣೆ ಮಾಡಿದ ಡೆಕ್ಕನ್ ಹೆರಿಟೇಜ್ ಫೌಂಡೇಷನ್ನ ಪ್ರತಿನಿಧಿಗಳು ಇಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಯಲು ವಸ್ತುಸಂಗ್ರಾಹಯದ ಡಿಪಿಆರ್ ತಯಾರಿಗೆ ನೆರವಾಗಲಿದ್ದಾರೆ’ ಎಂದು ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. ಗ್ರೀಸ್ನ ಡಾ. ಹೆಲೆನ್ ಮತ್ತು ಅಲೆಕ್ಸಾಂಡರ್ ಇಟಲಿಯ ಸ್ಟೀಫನ್ ಹಾಗೂ ಟ್ರಸ್ಟಿ ವೈಶಾಖ್ ಪ್ರಾಜೆಕ್ಟ್ ಮ್ಯಾನೇಜರ್ ಚರಣ್ ತಂಡದಲ್ಲಿದ್ದರು.</p>.<p><strong>ಶನಿವಾರವೂ ಯಾವುದೇ ಪ್ರಾಚ್ಯ ಅವಶೇಷ ಪತ್ತೆ ಇಲ್ಲ</strong> </p><p>ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಶನಿವಾರ ಯಾವುದೇ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಉತ್ಖನನ ನಡೆಯುತ್ತಿರುವ ಸ್ಥಳದ ಸಮೀಪ ಇರುವ ಸಿದ್ಧರ ಬಾವಿಯಲ್ಲಿ ಮತ್ತೊಂದು ಹಾವು ಗೋಚರಿಸಿದ್ದು ಜನರಲ್ಲಿ ಭೀತಿ ತರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>