ಲಕ್ಷ್ಮೇಶ್ವರ: ‘12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಅವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ’ ಎಂದು ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಹೇಳಿದ್ದಾರೆ.
‘ಸಮಾಜದಲ್ಲಿದ್ದ ಮೌಢ್ಯ ತೊಡೆದು ಹಾಕಲು ಬಸವಣ್ಣ ಅವರು ಮಾಡಿದ ಕ್ರಾಂತಿ ಚಿರಸ್ಮರಣೀಯ. ಅವರೊಬ್ಬ ಮಹಾನ್ ಹೋರಾಟಗಾರರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ಪದ್ಧತಿಯನ್ನು ತೊಲಗಿಸಲು ಅವರು ಅಂದು ಹೋರಾಡಿದ್ದರ ಫಲ ಇಂದು ಸಾಮಾನ್ಯ ಜನರಿಗೆ ಸಿಗುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.