‘ಮೇಕೆದಾಟು ಯೋಜನೆಗೆ ಬಿಜೆಪಿ ಸರ್ಕಾರದ ವಿರೋಧ ಇಲ್ಲ. ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಕ್ಲಿಯರೆನ್ಸ್ ಬಂದ ನಂತರ
ಕೆಲಸ ಆರಂಭವಾಗಲಿದೆ. ‘ನಮ್ಮ ನೀರು ನಮ್ಮ ಹಕ್ಕು’ ಅಂದರೆ, ಅದು ಕಾಂಗ್ರೆಸ್ನವರಿಗಷ್ಟೇ ನೀರಾ? ಉಳಿದವರಿಗೆ ಸಂಬಂಧವಿಲ್ಲವೇ? ಇಷ್ಟು ವರ್ಷಗಳು ಯಾಕೆ ಈ ಬಗ್ಗೆ ಚಿಂತನೆ ನಡೆಸಲಿಲ್ಲ. ಕಾಂಗ್ರೆಸ್ನವರು ತಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕಷ್ಟೇ ಪಾದಯಾತ್ರೆ ಆರಂಭಿಸಿದ್ದಾರೆ’ ಎಂದು ಅವರು ಕಿಡಿಕಾರಿದರು.