<p>ಗದಗ: ನಗರದ ಶ್ರೀನಿವಾಸ ಭವನದ ಹಿಂಬದಿಯಲ್ಲಿರುವ ಬಾಲಾಜಿ ಲೇಔಟ್ ನಿವಾಸಿಗಳು ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ಬಾಲಾಜಿ ಲೇಔಟ್ನಲ್ಲಿ 30 ಮನೆಗಳಿದ್ದು, ಇದರ ಸುತ್ತಮುತ್ತಲಿನ ಬಡಾವಣೆಗಳಲ್ಲಿ 50 ನಿವೇಶನಗಳಿವೆ. ಇವೆಲ್ಲವುಗಳಿಗೂ ಶ್ರೀನಿವಾಸ ಭವನದ ಪಕ್ಕದಲ್ಲಿರುವ ಒಂದೇ ರಸ್ತೆ ಇರುತ್ತದೆ. ಜತೆಗೆ ಅಲ್ಲೇ ಹಳ್ಳ ಕೂಡ ಇದ್ದು, ಅದಕ್ಕೊಂದು ಸೇತುವೆ ಇದೆ. ಆದರೆ, ಸತತ ಮಳೆಯಿಂದಾಗಿ ಸೇತುವೆ ಶಿಥಿಲಗೊಂಡಿವೆ. ಹಳ್ಳದಲ್ಲಿ ಬಹಳಷ್ಟು ಗಿಡಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ, ಸ್ವಲ್ಪ ಮಳೆಯಾದರೂ ಕೆಸರು ತುಂಬಿಕೊಳ್ಳುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.</p>.<p>ಪ್ರಸ್ತುತ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಬಡಾವಣೆಗೆ ಮತ್ತೊಂದು ಸೇತುವೆ ಅಗತ್ಯವಾಗಿ ಬೇಕಿದೆ. ಇಲ್ಲವಾದಲ್ಲಿ ಈ ಬಡಾವಣೆಯ ಜನರು ಮಳೆಗಾಲದಲ್ಲಿ ಹೊರ ಬರಲು ಸಾಧ್ಯವಾಗದೇ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ, ಶೀಘ್ರವೇ ಮತ್ತೊಂದು ಸೇತುವೆ ಹಾಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ನಗರದ ಶ್ರೀನಿವಾಸ ಭವನದ ಹಿಂಬದಿಯಲ್ಲಿರುವ ಬಾಲಾಜಿ ಲೇಔಟ್ ನಿವಾಸಿಗಳು ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ಬಾಲಾಜಿ ಲೇಔಟ್ನಲ್ಲಿ 30 ಮನೆಗಳಿದ್ದು, ಇದರ ಸುತ್ತಮುತ್ತಲಿನ ಬಡಾವಣೆಗಳಲ್ಲಿ 50 ನಿವೇಶನಗಳಿವೆ. ಇವೆಲ್ಲವುಗಳಿಗೂ ಶ್ರೀನಿವಾಸ ಭವನದ ಪಕ್ಕದಲ್ಲಿರುವ ಒಂದೇ ರಸ್ತೆ ಇರುತ್ತದೆ. ಜತೆಗೆ ಅಲ್ಲೇ ಹಳ್ಳ ಕೂಡ ಇದ್ದು, ಅದಕ್ಕೊಂದು ಸೇತುವೆ ಇದೆ. ಆದರೆ, ಸತತ ಮಳೆಯಿಂದಾಗಿ ಸೇತುವೆ ಶಿಥಿಲಗೊಂಡಿವೆ. ಹಳ್ಳದಲ್ಲಿ ಬಹಳಷ್ಟು ಗಿಡಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ, ಸ್ವಲ್ಪ ಮಳೆಯಾದರೂ ಕೆಸರು ತುಂಬಿಕೊಳ್ಳುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.</p>.<p>ಪ್ರಸ್ತುತ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಬಡಾವಣೆಗೆ ಮತ್ತೊಂದು ಸೇತುವೆ ಅಗತ್ಯವಾಗಿ ಬೇಕಿದೆ. ಇಲ್ಲವಾದಲ್ಲಿ ಈ ಬಡಾವಣೆಯ ಜನರು ಮಳೆಗಾಲದಲ್ಲಿ ಹೊರ ಬರಲು ಸಾಧ್ಯವಾಗದೇ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ, ಶೀಘ್ರವೇ ಮತ್ತೊಂದು ಸೇತುವೆ ಹಾಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>