‘ಶಾಸಕರು, ಡಿಸಿಯವರು ನೀರು ಪೂರೈಕೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚನೆ ನೀಡಿದ್ದರೂ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧಕ್ಕೆ ಕೈಬಿಟ್ಟಿದ್ದಾರೆ. ಇದರಿಂದ ಹಣವೂ ವ್ಯರ್ಥವಾಗುತ್ತದೆ ಹಾಗೂ ಜನರಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು‘ ಎಂದು ನಿವಾಸಿಗಳಾದ ಮಾರುತಿ ರಾಥೋಡ್, ಶರಣಪ್ಪ ಕೊಂಡಿ, ಚಂದ್ರಪ್ಪ ಬೂದಗುಂಪಿ, ಗುಂಡಪ್ಪ ಮಳ್ಳಿ ಆಗ್ರಹಿಸಿದರು.