ಸ್ಥಳಕ್ಕೆ ಬಂದ ಪಿಎಸ್ಐ ಶಿವಯೋಗಿ ಲೋಹಾರ ಅವರು ರೈತರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದರು. ಇದಕ್ಕೆ ಮಣಿಯದ ರೈತರು, ‘ಹತ್ತಿಯನ್ನು ಖರೀದಿಸುವವರೆಗೆ ಇಲ್ಲಿಂದ ಹೋಗುವುದಿಲ್ಲ’ ಎಂದರು. ನಂತರ ಲೋಹಾರ ಅವರು ‘ಸಿಸಿಐ’ ಅಧಿಕಾರಿ ಡಿ.ಶಕ್ತಿವೇಲು ಅವರೊಂದಿಗೆ ಮಾತನಾಡಿ, ರೈತರು ತಂದಿರುವ ಹತ್ತಿಯನ್ನು ಸಂಪೂರ್ಣವಾಗಿ ಖರೀದಿಸಲು ಮನವೊಲಿಸಿದರು. ನಂತರ ರೈತರು ಪ್ರತಿಭಟನೆ ಹಿಂಪೆಡದರು.