ಮತ್ತೆ ಮೂಡಿದ ಭರವಸೆ: ಮಳೆ ಕೊರತೆಯಿಂದಾಗಿ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ಈರುಳ್ಳಿ, ಬಳ್ಳಿ ಶೇಂಗಾ, ಗೋವಿನಜೋಳ ಮೆಣಸಿನಕಾಯಿ ಬೆಳೆಗಳು ಒಣಗಲು ಪ್ರಾರಂಭಿಸಿದ್ದವು. ರೈತರು ಮುಂಗಾರು ಬೆಳೆಯ ಆಸೆಯನ್ನೇ ಕೈಬಿಟ್ಟಿದ್ದರು.ಈಗ ಮಳೆ ಸುರಿದಿರುವುದರಿಂದ ಮತ್ತೆ ಭರವಸೆ ಮೂಡಿದೆ. ಇದೇ ರೀತಿಯಲ್ಲಿ ಇನ್ನೊಂದೆರಡು ಮಳೆ ಲಭಿಸಿದರೆ ಬೆಳೆಗಳು ಬದುಕಿ ಉಳಿಯಲಿವೆ ಎನ್ನುತ್ತಾರೆ ರೈತರು.