ಪುಣೆಯಲ್ಲಿ ಬಿಎಸ್ಸಿ ಓದುವಾಗಲೇ ಗಾಂಧಿ ತತ್ವದಿಂದ ಪ್ರೇರಣೆಗೊಂಡರಂಗರಾವ್ ಕುಲಕರ್ಣಿ ಅವರು ಮರಳಿ ಸ್ವಂತ ಊರು ಬಾಚಲಾಪುರಕ್ಕೆ ಬಂದು ನೆಲೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಜಾಗೃತಿ ಮೂಡಿಸಿದರು. ಗಾಂಧಿ ಅನುಯಾಯಿಯಾಗಿದ್ದ ಸೂಡಿ ಗ್ರಾಮದ ವೀರುಪಾಕ್ಷಪ್ಪ ಅಬ್ಬಿಗೇರಿ ಧ್ವಜ ಸತ್ಯಾಗ್ರಹ ಮಾಡಿ ಜೈಲು ಸೇರಿದರು. ಗಜೇಂದ್ರಗಡದ ಕುಂದರಗಿ ಅಂದಾನಪ್ಪ, ಹೊಸಳ್ಳಿಯ ನೀಲಗಂಗಯ್ಯ ಪೂಜಾರ, ಅಬ್ಬಿಗೇರಿಯ ಮಹಾದೇವಪ್ಪ ಕಂಬಳಿ, ಡಾ. ಕಾಶಿನಾಥಶಾಸ್ತ್ರಿ ಗಚ್ಚಿನಮಠ, ನರೇಗಲ್ನ ಬಸೆಟ್ಟಪ್ಪ ಜಕ್ಕಲಿ ಗಾಂಧಿ ತತ್ವಗಳಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು.