<p><strong>ಗದಗ: </strong>‘ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಸಂಸ್ಥಾಪಕರಾಗಿರುವ ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ತಿಂಗಳಿಂದ ಗದಗ ಕ್ರಿಕೆಟ್ ಲೀಗ್ (ಜಿಸಿಎಲ್) ನಡೆಯುತ್ತಿದ್ದು, ಕ್ರೀಡಾಂಗಣದ ಬಾಡಿಗೆ ಪಾವತಿಸಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್ ಆಡಿಸಲು ಕ್ರೀಡಾಂಗಣ ಬಳಸಿಕೊಳ್ಳುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ, ಸರ್ಕಾರಿ ಕ್ರೀಡಾಂಗಣವನ್ನು ಉಪಯೋಗಿಸುವವರು ಮುಂಚಿತವಾಗಿಯೇ ಬಳಸುವಷ್ಟು ದಿನಗಳ ಬಾಡಿಗೆ ತುಂಬುವುದು ನಿಯಮ. ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ’ ಎಂದು ತಿಳಿಸಿದರು.</p>.<p>‘ಕ್ರೀಡಾಂಗಣ ಬಳಸುತ್ತಿದ್ದರೂ ಬಾಡಿಗೆ ಕಟ್ಟಿಸಿಕೊಳ್ಳದಿರುವುದು ಸರ್ಕಾರಕ್ಕೇ ನಷ್ಟ. ಆದ್ದರಿಂದ, ಕೂಡಲೇ ಸಂಬಂಧಿಸಿದವರಿಂದ ಬಾಡಿಗೆ ಕಟ್ಟಿಸಿಕೊಳ್ಳಬೇಕು. ಇಲ್ಲವೇ, ಕ್ರೀಡಾಂಗಣಕ್ಕೆ ಅನುಮತಿ ನೀಡಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಿಂದ ತುಂಬಿಸಿಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದೇವೆ’ ಎಂದು ದಾಖಲೆ ನೀಡಿದರು.</p>.<p>‘ಅನಿಲ್ ಮೆಣಸಿನಕಾಯಿ ಅವರು ಗದಗ ನಗರದಲ್ಲಿ ಫ್ಲೈ ಓವರ್, ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊಂಬಳ ನಾಕಾ ರೈಲ್ವೆ ಮೇಲ್ಸೇತುವೆಯನ್ನು ಮೊದಲು ಪೂರ್ಣಗೊಳಿಸಿ, ನಂತರ ಫ್ಲೈ ಓವರ್ ಮಾಡಲಿ’ ಎಂದರು.</p>.<p>‘ಮನೆಗೊಂದು ರೊಟ್ಟಿ; ₹1 ನಾಣ್ಯ’ ಅಭಿಯಾನ ರಾಜಕೀಯ ಗಿಮಿಕ್ ಎಂಬುದು ಜನರಿಗೆ ಅರ್ಥವಾಗಿದೆ. ಬೆಂಗಳೂರಿನಲ್ಲಿ ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಉಳಿಯುವವರಿಗೆ ₹1 ನಾಣ್ಯ ಯಾವುದಕ್ಕೆ ಸಾಕಾಗಬೇಕು?’ ಎಂದು ವ್ಯಂಗ್ಯವಾಡಿದರು.</p>.<p>ಗದಗ-ಬೆಟಗೇರಿಗೆ 24/7 ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಹತ್ತು ವರ್ಷಗಳಲ್ಲಿ ₹203 ಕೋಟಿ ಖರ್ಚಾಗಿದೆ. ವಿಸ್ತರಣಾ ಯೋಜನೆಯ ಒಟ್ಟು ಅನುದಾನವೇ ₹216 ಕೋಟಿ. ಇಷ್ಟು ಹಣ ಖರ್ಚಾದರೂ ಅವಳಿ ನಗರದ ಜನರಿಗೆ 24 ದಿನಕ್ಕೊಮ್ಮೆ ನೀರು ಬರುತ್ತಿದೆ. ಹಾಗಾದರೆ, ಆ ಹಣವೆಲ್ಲಾ ಎಲ್ಲಿ ಹೋಯಿತು? ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿರಲು ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹೊಣೆ’ ಎಂದು ಆರೋಪ ಮಾಡಿದರು.</p>.<p>24/7 ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಹೇಳಿದರು.</p>.<p>ಜೆಡಿಎಸ್ ಮುಖಂಡರಾದ ಬಸವರಾಜ ಅಪ್ಪಣ್ಣವರ, ಹಾಜೇರಿ ಕೊಪ್ಪಳ, ಸಿರಾಜ್ ಕದಡಿ, ಪ್ರಫುಲ್ ಪುಣೇಕರ, ರಾಘವೇಂದ್ರ, ರಮೇಶ ಕಲಬುರಗಿ ಇದ್ದರು.</p>.<p class="Briefhead">‘ರೋಡ್ ಶೋ ವೇಳೆ ಸ್ಮೃತಿ ಪಲಾಯನ’</p>.<p>‘ಹಿಂದೆ ಅಡುಗೆ ಅನಿಲ ದರ ₹50 ಏರಿಕೆ ಆದಾಗ ರಸ್ತೆಗಿಳಿದು ಹೋರಾಡಿದ್ದ ಇಂದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಈಗ ಪ್ರತಿಭಟನೆ ಎದುರಿಸಲಾರದೇ ಪಲಾಯನ ಮಾಡಿದರು’ ಎಂದು ವೆಂಕನಗೌಡ ವ್ಯಂಗ್ಯವಾಡಿದರು.</p>.<p>‘ಗದಗ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಮಾರ್ಗ ಮಧ್ಯೆ ಮಹಿಳೆಯರು ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದನ್ನು ಕಂಡ ಅವರು, ಯಾತ್ರೆಯ ಮೆರವಣಿಗೆಯುದ್ದಕ್ಕೂ ಪಾಲ್ಗೊಳ್ಳದೇ ಅರ್ಧದಲ್ಲೇ ಮೊಟಕುಗೊಳಿಸಿ, ಹಿಂದಿರುಗಿದರು’ ಎಂದು ಹೇಳಿದರು.</p>.<p>ಕ್ರಿಕೆಟ್ ಆಡಿಸಲು ಕಳೆದ ಮೂರು ತಿಂಗಳಿಂದ ಜಿಲ್ಲಾ ಕ್ರೀಡಾಂಗಣವನ್ನು ಬಳಸುತ್ತಿರುವವರು ಬಾಡಿಗೆಯನ್ನೇ ಕಟ್ಟಿಲ್ಲ. ಬಾಕಿ ಉಳಿಸಿಕೊಂಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ ವೆಂಕನಗೌಡ ಆರ್. ಗೋವಿಂದಗೌಡ್ರ, ಜೆಡಿಎಸ್ ಮುಖಂಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>‘ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಸಂಸ್ಥಾಪಕರಾಗಿರುವ ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ತಿಂಗಳಿಂದ ಗದಗ ಕ್ರಿಕೆಟ್ ಲೀಗ್ (ಜಿಸಿಎಲ್) ನಡೆಯುತ್ತಿದ್ದು, ಕ್ರೀಡಾಂಗಣದ ಬಾಡಿಗೆ ಪಾವತಿಸಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್ ಆಡಿಸಲು ಕ್ರೀಡಾಂಗಣ ಬಳಸಿಕೊಳ್ಳುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ, ಸರ್ಕಾರಿ ಕ್ರೀಡಾಂಗಣವನ್ನು ಉಪಯೋಗಿಸುವವರು ಮುಂಚಿತವಾಗಿಯೇ ಬಳಸುವಷ್ಟು ದಿನಗಳ ಬಾಡಿಗೆ ತುಂಬುವುದು ನಿಯಮ. ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ’ ಎಂದು ತಿಳಿಸಿದರು.</p>.<p>‘ಕ್ರೀಡಾಂಗಣ ಬಳಸುತ್ತಿದ್ದರೂ ಬಾಡಿಗೆ ಕಟ್ಟಿಸಿಕೊಳ್ಳದಿರುವುದು ಸರ್ಕಾರಕ್ಕೇ ನಷ್ಟ. ಆದ್ದರಿಂದ, ಕೂಡಲೇ ಸಂಬಂಧಿಸಿದವರಿಂದ ಬಾಡಿಗೆ ಕಟ್ಟಿಸಿಕೊಳ್ಳಬೇಕು. ಇಲ್ಲವೇ, ಕ್ರೀಡಾಂಗಣಕ್ಕೆ ಅನುಮತಿ ನೀಡಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಿಂದ ತುಂಬಿಸಿಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದೇವೆ’ ಎಂದು ದಾಖಲೆ ನೀಡಿದರು.</p>.<p>‘ಅನಿಲ್ ಮೆಣಸಿನಕಾಯಿ ಅವರು ಗದಗ ನಗರದಲ್ಲಿ ಫ್ಲೈ ಓವರ್, ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊಂಬಳ ನಾಕಾ ರೈಲ್ವೆ ಮೇಲ್ಸೇತುವೆಯನ್ನು ಮೊದಲು ಪೂರ್ಣಗೊಳಿಸಿ, ನಂತರ ಫ್ಲೈ ಓವರ್ ಮಾಡಲಿ’ ಎಂದರು.</p>.<p>‘ಮನೆಗೊಂದು ರೊಟ್ಟಿ; ₹1 ನಾಣ್ಯ’ ಅಭಿಯಾನ ರಾಜಕೀಯ ಗಿಮಿಕ್ ಎಂಬುದು ಜನರಿಗೆ ಅರ್ಥವಾಗಿದೆ. ಬೆಂಗಳೂರಿನಲ್ಲಿ ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಉಳಿಯುವವರಿಗೆ ₹1 ನಾಣ್ಯ ಯಾವುದಕ್ಕೆ ಸಾಕಾಗಬೇಕು?’ ಎಂದು ವ್ಯಂಗ್ಯವಾಡಿದರು.</p>.<p>ಗದಗ-ಬೆಟಗೇರಿಗೆ 24/7 ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಹತ್ತು ವರ್ಷಗಳಲ್ಲಿ ₹203 ಕೋಟಿ ಖರ್ಚಾಗಿದೆ. ವಿಸ್ತರಣಾ ಯೋಜನೆಯ ಒಟ್ಟು ಅನುದಾನವೇ ₹216 ಕೋಟಿ. ಇಷ್ಟು ಹಣ ಖರ್ಚಾದರೂ ಅವಳಿ ನಗರದ ಜನರಿಗೆ 24 ದಿನಕ್ಕೊಮ್ಮೆ ನೀರು ಬರುತ್ತಿದೆ. ಹಾಗಾದರೆ, ಆ ಹಣವೆಲ್ಲಾ ಎಲ್ಲಿ ಹೋಯಿತು? ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿರಲು ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹೊಣೆ’ ಎಂದು ಆರೋಪ ಮಾಡಿದರು.</p>.<p>24/7 ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಹೇಳಿದರು.</p>.<p>ಜೆಡಿಎಸ್ ಮುಖಂಡರಾದ ಬಸವರಾಜ ಅಪ್ಪಣ್ಣವರ, ಹಾಜೇರಿ ಕೊಪ್ಪಳ, ಸಿರಾಜ್ ಕದಡಿ, ಪ್ರಫುಲ್ ಪುಣೇಕರ, ರಾಘವೇಂದ್ರ, ರಮೇಶ ಕಲಬುರಗಿ ಇದ್ದರು.</p>.<p class="Briefhead">‘ರೋಡ್ ಶೋ ವೇಳೆ ಸ್ಮೃತಿ ಪಲಾಯನ’</p>.<p>‘ಹಿಂದೆ ಅಡುಗೆ ಅನಿಲ ದರ ₹50 ಏರಿಕೆ ಆದಾಗ ರಸ್ತೆಗಿಳಿದು ಹೋರಾಡಿದ್ದ ಇಂದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಈಗ ಪ್ರತಿಭಟನೆ ಎದುರಿಸಲಾರದೇ ಪಲಾಯನ ಮಾಡಿದರು’ ಎಂದು ವೆಂಕನಗೌಡ ವ್ಯಂಗ್ಯವಾಡಿದರು.</p>.<p>‘ಗದಗ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಮಾರ್ಗ ಮಧ್ಯೆ ಮಹಿಳೆಯರು ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದನ್ನು ಕಂಡ ಅವರು, ಯಾತ್ರೆಯ ಮೆರವಣಿಗೆಯುದ್ದಕ್ಕೂ ಪಾಲ್ಗೊಳ್ಳದೇ ಅರ್ಧದಲ್ಲೇ ಮೊಟಕುಗೊಳಿಸಿ, ಹಿಂದಿರುಗಿದರು’ ಎಂದು ಹೇಳಿದರು.</p>.<p>ಕ್ರಿಕೆಟ್ ಆಡಿಸಲು ಕಳೆದ ಮೂರು ತಿಂಗಳಿಂದ ಜಿಲ್ಲಾ ಕ್ರೀಡಾಂಗಣವನ್ನು ಬಳಸುತ್ತಿರುವವರು ಬಾಡಿಗೆಯನ್ನೇ ಕಟ್ಟಿಲ್ಲ. ಬಾಕಿ ಉಳಿಸಿಕೊಂಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ ವೆಂಕನಗೌಡ ಆರ್. ಗೋವಿಂದಗೌಡ್ರ, ಜೆಡಿಎಸ್ ಮುಖಂಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>