‘60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಿಗೆ ಆಗ ಜನರ ಸಮಸ್ಯೆಗಳು ನೆನಪಾಗಲಿಲ್ಲವೇ? ಅಧಿಕಾರ ಕಳೆದುಕೊಂಡ ನಂತರವಷ್ಟೇ ಜನರು ನೆನಪಾದರೆ? ಈಗಾಗಲೇ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್, ಜನರ ಮಧ್ಯೆ ಹೆಸರು ಉಳಿಯಲಿ ಎಂಬ ಕಾರಣಕ್ಕೆ ಉತ್ಸವ ಆಯೋಜಿಸಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಬಳಿಗೆ ಹೋಗಲು ಅವರಿಗೆ ಒಂದು ಕಾರಣ ಬೇಕಿತ್ತು. ಹಾಗಾಗಿ, ಸಿದ್ದರಾಮೋತ್ಸವ ಎಂಬುದು ರಾಜಕೀಯ ಗಿಮಿಕ್ ಅಷ್ಟೇ’ ಎಂದು ಹೇಳಿದರು.