<p>ಡಂಬಳ: ಕಳೆದ ಎರಡು ಮೂರು ದಿನದಿಂದ ಜಿಟಿಜಿಟಿ ಮಳೆ ಆದ ಪರಿಣಾಮ ಮತ್ತು ಶನಿವಾರ ಮಧ್ಯಾಹ್ನ ಸತತ ಒಂದು ಗಂಟೆಯ ಕಾಲ ಸುರಿದಿದ್ದರಿಂದ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಡಂಬಳದಲ್ಲಿನ ಗ್ರಾಮದಲ್ಲಿ ಸಾಧಾರಣ ಮಳೆ ಆಗಿದೆ.</p>.<p>ಡಂಬಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕು ಗಂಟೆಯವರಿಗೆ ಉತ್ತಮವಾಗಿ ಮಳೆ ಸುರಿಯಿತು. ಐದರಿಂದ ಹತ್ತು ನಿಮಿಷಗಳ ಕಾಲ ಜಿಟಿ ಜಿಟಿಯಿಂದ ಪ್ರಾರಂಭವಾದ ಮಳೆ ನಂತರ ಜೋರಾಗಿ ಸುರಿಯಿತು. ಗುಡುಗು ಸಿಡಿಲು ಮಿಂಚು ಸಮೇತ ವೇಗವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು.</p>.<p>ಜೋರಾದ ಮಳೆಯಲ್ಲೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯ ಪೂರ್ವ ತಯಾರಿ ಮಾಡಲು ಜಮೀನುಗಳಿಗೆ ಹೋಗಿದ್ದ ರೈತರು ಕೂಲಿ ಕಾರ್ಮಿಕರು ಹಾಗೂ ಇತರರು ಮಳೆಯಲ್ಲಿಯೇ ತೋಯಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡು ಬಂತು.</p>.<p>ಬಿಸಿಲಿನ ತಾಪಮಾನ ಹಾಗೂ ಸೆಕೆಯ ಪರಿಣಾಮ ತತ್ತರಿಸಿದ್ದ ಜನತೆಗೆ ಸ್ವಲ್ಪ ನೆಮ್ಮದಿ ನೀಡಿದಂತೆ ಆಗಿದೆ. ಜೋರಾದ ಮಳೆಯಲ್ಲಿಯೇ ಸ್ಥಳೀಯ ಜಗದ್ಗುರು ತೋಂಟದಾರ್ಯ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಮಳೆಯಲ್ಲೆ ತೋಯಿಸಿಕೊಂಡು ಹೋಗುವ ಚಿತ್ರಣ ಕಂಡುಬಂತು.</p>.<p>ವಾರದಲ್ಲಿ ಎರಡು ದಿನ ಸಾಧಾರಣ ಮಳೆಯಾಗಿದ್ದರಿಂದ ಮತ್ತು ಶನಿವಾರ ದಿವಸ ಹದವಾದ ಮಳೆ ಆಗಿದ್ದರಿಂದ ರೈತ ಸಮೂಹಕ್ಕೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಆಗುವ ನಿರೀಕ್ಷೆ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಂಬಳ: ಕಳೆದ ಎರಡು ಮೂರು ದಿನದಿಂದ ಜಿಟಿಜಿಟಿ ಮಳೆ ಆದ ಪರಿಣಾಮ ಮತ್ತು ಶನಿವಾರ ಮಧ್ಯಾಹ್ನ ಸತತ ಒಂದು ಗಂಟೆಯ ಕಾಲ ಸುರಿದಿದ್ದರಿಂದ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಡಂಬಳದಲ್ಲಿನ ಗ್ರಾಮದಲ್ಲಿ ಸಾಧಾರಣ ಮಳೆ ಆಗಿದೆ.</p>.<p>ಡಂಬಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕು ಗಂಟೆಯವರಿಗೆ ಉತ್ತಮವಾಗಿ ಮಳೆ ಸುರಿಯಿತು. ಐದರಿಂದ ಹತ್ತು ನಿಮಿಷಗಳ ಕಾಲ ಜಿಟಿ ಜಿಟಿಯಿಂದ ಪ್ರಾರಂಭವಾದ ಮಳೆ ನಂತರ ಜೋರಾಗಿ ಸುರಿಯಿತು. ಗುಡುಗು ಸಿಡಿಲು ಮಿಂಚು ಸಮೇತ ವೇಗವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು.</p>.<p>ಜೋರಾದ ಮಳೆಯಲ್ಲೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯ ಪೂರ್ವ ತಯಾರಿ ಮಾಡಲು ಜಮೀನುಗಳಿಗೆ ಹೋಗಿದ್ದ ರೈತರು ಕೂಲಿ ಕಾರ್ಮಿಕರು ಹಾಗೂ ಇತರರು ಮಳೆಯಲ್ಲಿಯೇ ತೋಯಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡು ಬಂತು.</p>.<p>ಬಿಸಿಲಿನ ತಾಪಮಾನ ಹಾಗೂ ಸೆಕೆಯ ಪರಿಣಾಮ ತತ್ತರಿಸಿದ್ದ ಜನತೆಗೆ ಸ್ವಲ್ಪ ನೆಮ್ಮದಿ ನೀಡಿದಂತೆ ಆಗಿದೆ. ಜೋರಾದ ಮಳೆಯಲ್ಲಿಯೇ ಸ್ಥಳೀಯ ಜಗದ್ಗುರು ತೋಂಟದಾರ್ಯ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಮಳೆಯಲ್ಲೆ ತೋಯಿಸಿಕೊಂಡು ಹೋಗುವ ಚಿತ್ರಣ ಕಂಡುಬಂತು.</p>.<p>ವಾರದಲ್ಲಿ ಎರಡು ದಿನ ಸಾಧಾರಣ ಮಳೆಯಾಗಿದ್ದರಿಂದ ಮತ್ತು ಶನಿವಾರ ದಿವಸ ಹದವಾದ ಮಳೆ ಆಗಿದ್ದರಿಂದ ರೈತ ಸಮೂಹಕ್ಕೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಆಗುವ ನಿರೀಕ್ಷೆ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>