ಮಳೆ ಬಂದರೆ ಕೆಸರು ಗದ್ದೆ, ಬೇಸಿಗೆ ಬಂದರೆ ದೂಳಿನಿಂದ ಆವೃತವಾಗುವ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿ
ನಿಧಿಗಳಿಗೆ ಜನರ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲ ಎಂದು ಇಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನ, ಮುಸ್ತಾಕ ಶಿಗ್ಲಿ ಬೇಸರ ವ್ಯಕ್ತಪಡಿಸಿದರು.