<p><strong>ಗದಗ</strong>: ಸರ್ಕಾರಿ ವೈದ್ಯರಾಗಿದ್ದ ಚಂದ್ರು ಲಮಾಣಿ ಅವರು ಯಾವುದೇ ‘ಗಾಢ್<br>ಫಾದರ್’ ಇಲ್ಲದೇ ಅತ್ಯಲ್ಪ ಸಮಯದಲ್ಲೇ ರಾಜಕೀಯವಾಗಿ ಉನ್ನತಿಗೆ ಏರಿದ್ದರು. </p><p>ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ನಂತರ, ನೌಕರಿಗೆ ರಾಜೀನಾಮೆ ನೀಡಿ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಾಲಾಜಿ ಆಸ್ಪತ್ರೆಯನ್ನು ಆರಂಭಿಸಿದ್ದರು.</p><p><strong>ಮೊದಲ ಯತ್ನದಲ್ಲೇ ಗೆಲುವು</strong></p><p>ಕೋವಿಡ್ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ, ಉಚಿತ ಆರೋಗ್ಯ ತಪಾಸಣೆ, ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜನರ ಮನಗೆದ್ದಿದ್ದರು. ಅದನ್ನೇ ಚಿಮ್ಮುಹಲಗೆ ಮಾಡಿಕೊಂಡು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು.</p><p>2018–23ರ ಅವಧಿಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಾಮಣ್ಣ ಲಮಾಣಿ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದರು. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಪ್ರತಿಸ್ಪರ್ಧಿ ಪಕ್ಷದಲ್ಲೂ ಭಿನ್ನಮತ ಸ್ಫೋಟಗೊಂಡಿತ್ತು. </p><p>ಬಿಜೆಪಿ ಕಾರ್ಯಕರ್ತರ ಅಸಮಾಧಾನ, ಪ್ರತಿಸ್ಪರ್ಧಿ ಪಕ್ಷದ ಭಿನ್ನಮತದ ಒಡಕಿನ ಲಾಭದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ 2023ರ ಚುನಾವಣೆಯಲ್ಲಿ 74,489 ಮತಗಳನ್ನು ಪಡೆಯುವ ಮೂಲಕ 28,520 ಮತಗಳ ಅಂತರದ ಗೆಲುವು ದಾಖಲಿಸಿದ್ದರು. </p>.ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ.ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ಸರ್ಕಾರಿ ವೈದ್ಯರಾಗಿದ್ದ ಚಂದ್ರು ಲಮಾಣಿ ಅವರು ಯಾವುದೇ ‘ಗಾಢ್<br>ಫಾದರ್’ ಇಲ್ಲದೇ ಅತ್ಯಲ್ಪ ಸಮಯದಲ್ಲೇ ರಾಜಕೀಯವಾಗಿ ಉನ್ನತಿಗೆ ಏರಿದ್ದರು. </p><p>ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ನಂತರ, ನೌಕರಿಗೆ ರಾಜೀನಾಮೆ ನೀಡಿ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಾಲಾಜಿ ಆಸ್ಪತ್ರೆಯನ್ನು ಆರಂಭಿಸಿದ್ದರು.</p><p><strong>ಮೊದಲ ಯತ್ನದಲ್ಲೇ ಗೆಲುವು</strong></p><p>ಕೋವಿಡ್ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ, ಉಚಿತ ಆರೋಗ್ಯ ತಪಾಸಣೆ, ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜನರ ಮನಗೆದ್ದಿದ್ದರು. ಅದನ್ನೇ ಚಿಮ್ಮುಹಲಗೆ ಮಾಡಿಕೊಂಡು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು.</p><p>2018–23ರ ಅವಧಿಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಾಮಣ್ಣ ಲಮಾಣಿ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದರು. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಪ್ರತಿಸ್ಪರ್ಧಿ ಪಕ್ಷದಲ್ಲೂ ಭಿನ್ನಮತ ಸ್ಫೋಟಗೊಂಡಿತ್ತು. </p><p>ಬಿಜೆಪಿ ಕಾರ್ಯಕರ್ತರ ಅಸಮಾಧಾನ, ಪ್ರತಿಸ್ಪರ್ಧಿ ಪಕ್ಷದ ಭಿನ್ನಮತದ ಒಡಕಿನ ಲಾಭದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ 2023ರ ಚುನಾವಣೆಯಲ್ಲಿ 74,489 ಮತಗಳನ್ನು ಪಡೆಯುವ ಮೂಲಕ 28,520 ಮತಗಳ ಅಂತರದ ಗೆಲುವು ದಾಖಲಿಸಿದ್ದರು. </p>.ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ.ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>