ಜಿಲ್ಲೆಯ ಉಳಿದ ಕಡೆಗಳಲ್ಲಿ ಆ.15ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯುತ್ತದೆ. ಆದರೆ, ಮುಂಡರಗಿ ಕನಕಪ್ಪನ ಗುಡ್ಡದಲ್ಲಿ ಮಾತ್ರ 14ರ ಮಧ್ಯರಾತ್ರಿಯೇ ತ್ರಿವರ್ಣ ಧ್ವಜ ಹಾರಾಡುತ್ತದೆ. ಈ ಬಾರಿ ಈ ಧ್ವಜಾರೋಹಣಕ್ಕೆ 25 ವರ್ಷಗಳು ತುಂಬುತ್ತಿದ್ದು, ಇದನ್ನು ವಿಶೇಷವಾಗಿ ಆಚರಿಸಲು ಕ್ರಾಂತಿ ಸೇನೆ ಸಿದ್ಧವಾಗಿದೆ. 1995ರ ಅ.15ರಂದು ಪಟ್ಟಣದ ಸಮಾಜ ಸೇವಕ ಮಂಜುನಾಥ ಇಟಗಿ ಅವರ ನೇತೃತ್ವದಲ್ಲಿ ಶಿವಾನಂದ ನವಲಗುಂದ, ಸಿದ್ದು ಅಂಗಡಿ, ಎನ್.ವಿ.ಹಿರೇಮಠ, ಆನಂದ ರಾಮೇನಹಳ್ಳಿ ಹಾಗೂ ಮಹಾದೇವ ದೊಣ್ಣಿ ಅವರನ್ನು ಒಳಗೊಮಡ 6 ಜನರ ತಂಡದೊಂದಿಗೆ ಪ್ರಾರಂಭವಾದ ಕನ್ನಡ ಕ್ರಾಂತಿ ಸೇನೆಯು, ಇಂದಿಗೆ ಹೆಮ್ಮರವಾಗಿ ಬೆಳೆದಿದೆ.