ನರಗುಂದದ ಎಪಿಎಂಸಿ ಆವರಣದಲ್ಲಿ ನರಗುಂದ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಿದರು.
ಅಪೂರ್ಣಗೊಂಡ ಸಾಯಿ ಮಂದಿರದ ಕಟ್ಟಡ ಪೂರ್ಣಗೊಳಿಸಲು ₹10 ಲಕ್ಷ ದೇಣಿಗೆ ನೀಡುತ್ತೇನೆ. ಎಲ್ಲ ವ್ಯಾಪಾರಸ್ಥರು ದೇಣಿಗೆ ನೀಡಿ ಸಹಕರಿಸಬೇಕು
ಸಿ.ಸಿ. ಪಾಟೀಲ ಶಾಸಕ
‘ರೈಲ್ವೆ ಮಾರ್ಗ ನಿರ್ಮಾಣದ ಚರ್ಚೆ’
‘ವ್ಯಾಪಾರಸ್ಥರು ಮತ್ತು ರೈತರ ಮಧ್ಯೆ ಹಣಕಾಸಿನ ವ್ಯವಹಾರ ಅನುಕೂಲಕರ ರೀತಿಯಲ್ಲಿ ನಡೆಯುತ್ತಿದೆ. ವ್ಯಾಪಾರಸ್ಥರಿಂದ ರೈತರಿಗೆ ಹೆಚ್ಚು ಅನುಕೂಲ ಸಿಗಬೇಕು. ನರಗುಂದಕ್ಕೆ ಅಗತ್ಯವಿರುವ ರೈಲ್ವೆ ಮಾರ್ಗದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚೆ ಮಾಡುತ್ತೇನೆ’ ಎಂದು ಸಂಸದ ಪಿ.ಸಿ. ಗದ್ದಿಗೌಡ್ರ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ ‘ವಾಣಿಜ್ಯೋದ್ಯಮ ಸಂಘದ ಕಟ್ಟಡವು ರೈತರು ಹಾಗೂ ವರ್ತಕರ ಕೊಂಡಿಯಾಗಿ ಉತ್ತಮ ಸೇವೆ ನೀಡಲಿ’ ಎಂದು ಹಾರೈಸಿದರು.