<p><strong>ನರಗುಂದ</strong>: ಬಂಡಾಯದ ನಾಡು ನರಗುಂದ ಈಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಅದರಲ್ಲೂ ತಾಂತ್ರಿಕ ಶಿಕ್ಷಣ ನೀಡಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಮಾದರಿ ಪಟ್ಟಣವಾಗುತ್ತಿರುವುದಕ್ಕೆ ಶೀಘ್ರ ಕಾರ್ಯಾರಂಭ ಮಾಡಲಿರುವ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಸಾಕ್ಷಿಯಾಗಿದೆ.</p>.<p>ಈಗಾಗಲೇ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಹೊಂದಿರುವ ನರಗುಂದ ಪಟ್ಟಣ ಈ ಜಿಟಿಟಿಸಿ ಕೇಂದ್ರದಿಂದ ಮತ್ತಷ್ಟು ಕೈಗಾರಿಕಾ ತರಬೇತಿ ಆಕಾಂಕ್ಷಿಗಳಿಗೆ ವರದಾನವಾಗಲಿದೆ. ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರತಿಷ್ಠಿತ ಅಂಗ ಸಂಸ್ಥೆಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ - ಜಿಟಿಟಿಸಿಯು ಪಟ್ಟಣದಲ್ಲಿ ನೂತನ ಶಾಖೆಯನ್ನು ತೆರೆಯುತ್ತಿದೆ. ಪಟ್ಟಣದ ಅಳಗವಾಡಿ ರಸ್ತೆಯಲ್ಲಿನ ಸ್ವಂತ ನಿವೇಶನದಲ್ಲಿ ಈಗಾಗಲೇ ವರ್ಕಶಾಪ್ ಕಟ್ಟಡ ನಿರ್ಮಾಣಗೊಂಡಿದ್ದು ತರಬೇತಿ ಆರಂಭಿಸುತ್ತಿದೆ. ಬೆಂಗಳೂರಿನ ಟೊಯೊಟ ಕಿರ್ಲೋಸ್ಕರ್ ಮೋಟರ್ಸ್ ಲಿಮಿಟೆಡ್ ಕಂಪೆನಿಯ ಸಹಯೋಗದಲ್ಲಿ 1+2 ವರ್ಷ ಅವಧಿಯ ‘ಅಟೊಮೋಟಿವ್ ವೆಹಿಕಲ್ ಅಸೆಂಬ್ಲಿ’ ವೃತ್ತಿ ತರಬೇತಿಯನ್ನು ಆರಂಭಿಸುತ್ತಿದೆ.</p>.<p>ಈ ತರಬೇತಿಯು ಜ. 22ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಸ್ವೀಕರಿಸಲಾಗುತ್ತಿದೆ. ಹತ್ತನೇ ತರಗತಿ ಪಾಸಾದ 17 ರಿಂದ 22 ವಯೋಮಿತಿಯೊಳಗಿನ ಯುವಕರು ಈ ತರಬೇತಿಗಳಿಗೆ ಅರ್ಹರಿರುತ್ತಾರೆ. ಮೂರು ವರ್ಷ ಅವಧಿಯ ಈ ತರಬೇತಿಯಲ್ಲಿ ಮೊದಲನೆಯ ವರ್ಷ ಪಟ್ಟಣದ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ನಂತರದ ಎರಡು ವರ್ಷ ಬೆಂಗಳೂರಿನ ಟೊಯೊಟಾ ಕಾರು ಉತ್ಪಾದನಾ ಕಂಪನಿಯಲ್ಲಿ ಪ್ರತಿ ತಿಂಗಳು ₹ 15 ಸಾವಿರ ಶಿಷ್ಯವೇತನದೊಂದಿಗೆ ಆನ್-ದ-ಜಾಬ್ ತರಬೇತಿ ನೀಡಲಾಗುವುದು. 3 ವರ್ಷದ ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳಿಗೆ ಟೊಯೊಟಾ ಸಮೂಹದಲ್ಲಿ ಉದ್ಯೋಗ ದೊರಕಲಿದೆ. ಈ ತರಬೇತಿ ಪಡೆದ ಟೆಕ್ನಿಷಿಯನ್ಗಳಿಗೆ ಅಟೊಮೊಬೈಲ್ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಜಿಟಿಟಿಸಿ ತರಬೇತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಜಿಟಿಟಿಸಿಯಲ್ಲಿ ಯಂತ್ರೋಪಕರಣಗಳನ್ನು ಮತ್ತು ಕ್ಯಾಡ್-ಕ್ಯಾಮ್ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಪ್ರಾಕ್ಟಿಕಲ್ ಇಂಟೆಗ್ರೇಟೆಡ್ ಆನ್ ಜಾಬ್ ತರಬೇತಿ ನೀಡುವ ಉದ್ದೇಶ ಹೊಂದಿರುವ ಕೇಂದ್ರ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಶತ ಪ್ರತಿ ಶತ ಉದ್ಯೋಗಾವಕಾಶ ಒದಗಿಸುವುದು ಜಿಟಿಟಿಸಿಯ ವಿಶೇಷತೆ.</p>.<p>ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಕೌಶಲ ತರಬೇತಿಗಳನ್ನು ಕೂಡ ಬರುವ ಮಾರ್ಚ್ ತಿಂಗಳಿನಿಂದ ಆರಂಭಿಸಲಾಗುವುದು. 2024-25 ನೇ ಸಾಲಿನಲ್ಲಿ ಗದಗ ಜಿಲ್ಲೆಯ 400 ಯುವಕ-ಯುವತಿಯರಿಗೆ ಉಚಿತ ಕೌಶಲ ತರಬೇತಿ ನೀಡಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.</p>.<p>ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ ಅಡಿ ನರಗುಂದದಲ್ಲಿ ಸಿ.ಎನ್.ಸಿ. ಪ್ರೊಗ್ರಾಮಿಂಗ್, ಸಿ.ಎನ್.ಸಿ. ಆಪರೇಟಿಂಗ್, ಕ್ಯಾಡ್-ಕ್ಯಾಮ್, ಎಲೆಕ್ಟ್ರಿಶಿಯನ್, ಮಶಿನಿಸ್ಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ವೃತ್ತಿಗಳಲ್ಲಿ ಉಚಿತ ಕೌಶಲ ತರಬೇತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ, ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ಜಿಟಿಟಿಸಿ ಈ ಕೌಶಲ ತರಬೇತಿಗಳನ್ನು ಪ್ರತಿ ತಿಂಗಳು ಆಯೋಜಿಸಲಿದೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲಿದೆ. <br> ಆಸಕ್ತರು ಜ. 19ರೊಳಗಾಗಿ ಜಿಟಿಟಿಸಿಯ ನರಗುಂದ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. <strong>ಹೆಚ್ಚಿನ ಮಾಹಿತಿಗೆ ಮೊ</strong>: 7975762499 ಮತ್ತು 9902101010 ಸಂಪರ್ಕಿಸಬಹುದು.</p>.<p>‘ಸದ್ಯದಲ್ಲಿಯೇ ಬೋಧನಾ ಕೊಠಡಿಗಳು ಮತ್ತು ವಿದ್ಯಾರ್ಥಿನಿಲಯಗಳ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಸಂಪೂರ್ಣ ಕ್ಯಾಂಪಸ್ ನಿರ್ಮಾಣದ ನಂತರ ಜಿಟಿಟಿಸಿ ಕೇಂದ್ರದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ಡಿಪ್ಲೊಮಾ ಕೋರ್ಸ್ಗಳನ್ನು ಆಯೋಜಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ಮಾರುತಿ ಭಜಂತ್ರಿ ಹೇಳಿದರು.</p>.<p><strong>ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿ </strong></p><p>ಪಟ್ಟಣದಲ್ಲಿ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ. ತಾಂತ್ರಿಕ ಹಾಗೂ ಅಲ್ಪಾವಧಿ ಕೈಗಾರಿಕಾ ತರಬೇತಿ ಆರಂಭಗೊಳ್ಳುತ್ತಿರುವುದು ಹರ್ಷದಾಯಕ. ಪೂರ್ಣ ಪ್ರಮಾಣದಲ್ಲಿ ಡಿಪ್ಲೊಮಾ ಕೋರ್ಸ್ ಬೇಗ ಆರಂಭವಾಗಬೇಕು- ಸಿದ್ದು ನಂದಿ ನರಗುಂದ, ನಾಗರಿಕರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ</strong>: ಬಂಡಾಯದ ನಾಡು ನರಗುಂದ ಈಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಅದರಲ್ಲೂ ತಾಂತ್ರಿಕ ಶಿಕ್ಷಣ ನೀಡಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಮಾದರಿ ಪಟ್ಟಣವಾಗುತ್ತಿರುವುದಕ್ಕೆ ಶೀಘ್ರ ಕಾರ್ಯಾರಂಭ ಮಾಡಲಿರುವ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಸಾಕ್ಷಿಯಾಗಿದೆ.</p>.<p>ಈಗಾಗಲೇ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಹೊಂದಿರುವ ನರಗುಂದ ಪಟ್ಟಣ ಈ ಜಿಟಿಟಿಸಿ ಕೇಂದ್ರದಿಂದ ಮತ್ತಷ್ಟು ಕೈಗಾರಿಕಾ ತರಬೇತಿ ಆಕಾಂಕ್ಷಿಗಳಿಗೆ ವರದಾನವಾಗಲಿದೆ. ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರತಿಷ್ಠಿತ ಅಂಗ ಸಂಸ್ಥೆಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ - ಜಿಟಿಟಿಸಿಯು ಪಟ್ಟಣದಲ್ಲಿ ನೂತನ ಶಾಖೆಯನ್ನು ತೆರೆಯುತ್ತಿದೆ. ಪಟ್ಟಣದ ಅಳಗವಾಡಿ ರಸ್ತೆಯಲ್ಲಿನ ಸ್ವಂತ ನಿವೇಶನದಲ್ಲಿ ಈಗಾಗಲೇ ವರ್ಕಶಾಪ್ ಕಟ್ಟಡ ನಿರ್ಮಾಣಗೊಂಡಿದ್ದು ತರಬೇತಿ ಆರಂಭಿಸುತ್ತಿದೆ. ಬೆಂಗಳೂರಿನ ಟೊಯೊಟ ಕಿರ್ಲೋಸ್ಕರ್ ಮೋಟರ್ಸ್ ಲಿಮಿಟೆಡ್ ಕಂಪೆನಿಯ ಸಹಯೋಗದಲ್ಲಿ 1+2 ವರ್ಷ ಅವಧಿಯ ‘ಅಟೊಮೋಟಿವ್ ವೆಹಿಕಲ್ ಅಸೆಂಬ್ಲಿ’ ವೃತ್ತಿ ತರಬೇತಿಯನ್ನು ಆರಂಭಿಸುತ್ತಿದೆ.</p>.<p>ಈ ತರಬೇತಿಯು ಜ. 22ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಸ್ವೀಕರಿಸಲಾಗುತ್ತಿದೆ. ಹತ್ತನೇ ತರಗತಿ ಪಾಸಾದ 17 ರಿಂದ 22 ವಯೋಮಿತಿಯೊಳಗಿನ ಯುವಕರು ಈ ತರಬೇತಿಗಳಿಗೆ ಅರ್ಹರಿರುತ್ತಾರೆ. ಮೂರು ವರ್ಷ ಅವಧಿಯ ಈ ತರಬೇತಿಯಲ್ಲಿ ಮೊದಲನೆಯ ವರ್ಷ ಪಟ್ಟಣದ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ನಂತರದ ಎರಡು ವರ್ಷ ಬೆಂಗಳೂರಿನ ಟೊಯೊಟಾ ಕಾರು ಉತ್ಪಾದನಾ ಕಂಪನಿಯಲ್ಲಿ ಪ್ರತಿ ತಿಂಗಳು ₹ 15 ಸಾವಿರ ಶಿಷ್ಯವೇತನದೊಂದಿಗೆ ಆನ್-ದ-ಜಾಬ್ ತರಬೇತಿ ನೀಡಲಾಗುವುದು. 3 ವರ್ಷದ ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳಿಗೆ ಟೊಯೊಟಾ ಸಮೂಹದಲ್ಲಿ ಉದ್ಯೋಗ ದೊರಕಲಿದೆ. ಈ ತರಬೇತಿ ಪಡೆದ ಟೆಕ್ನಿಷಿಯನ್ಗಳಿಗೆ ಅಟೊಮೊಬೈಲ್ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಜಿಟಿಟಿಸಿ ತರಬೇತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಜಿಟಿಟಿಸಿಯಲ್ಲಿ ಯಂತ್ರೋಪಕರಣಗಳನ್ನು ಮತ್ತು ಕ್ಯಾಡ್-ಕ್ಯಾಮ್ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಪ್ರಾಕ್ಟಿಕಲ್ ಇಂಟೆಗ್ರೇಟೆಡ್ ಆನ್ ಜಾಬ್ ತರಬೇತಿ ನೀಡುವ ಉದ್ದೇಶ ಹೊಂದಿರುವ ಕೇಂದ್ರ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಶತ ಪ್ರತಿ ಶತ ಉದ್ಯೋಗಾವಕಾಶ ಒದಗಿಸುವುದು ಜಿಟಿಟಿಸಿಯ ವಿಶೇಷತೆ.</p>.<p>ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಕೌಶಲ ತರಬೇತಿಗಳನ್ನು ಕೂಡ ಬರುವ ಮಾರ್ಚ್ ತಿಂಗಳಿನಿಂದ ಆರಂಭಿಸಲಾಗುವುದು. 2024-25 ನೇ ಸಾಲಿನಲ್ಲಿ ಗದಗ ಜಿಲ್ಲೆಯ 400 ಯುವಕ-ಯುವತಿಯರಿಗೆ ಉಚಿತ ಕೌಶಲ ತರಬೇತಿ ನೀಡಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.</p>.<p>ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ ಅಡಿ ನರಗುಂದದಲ್ಲಿ ಸಿ.ಎನ್.ಸಿ. ಪ್ರೊಗ್ರಾಮಿಂಗ್, ಸಿ.ಎನ್.ಸಿ. ಆಪರೇಟಿಂಗ್, ಕ್ಯಾಡ್-ಕ್ಯಾಮ್, ಎಲೆಕ್ಟ್ರಿಶಿಯನ್, ಮಶಿನಿಸ್ಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ವೃತ್ತಿಗಳಲ್ಲಿ ಉಚಿತ ಕೌಶಲ ತರಬೇತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ, ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ಜಿಟಿಟಿಸಿ ಈ ಕೌಶಲ ತರಬೇತಿಗಳನ್ನು ಪ್ರತಿ ತಿಂಗಳು ಆಯೋಜಿಸಲಿದೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲಿದೆ. <br> ಆಸಕ್ತರು ಜ. 19ರೊಳಗಾಗಿ ಜಿಟಿಟಿಸಿಯ ನರಗುಂದ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. <strong>ಹೆಚ್ಚಿನ ಮಾಹಿತಿಗೆ ಮೊ</strong>: 7975762499 ಮತ್ತು 9902101010 ಸಂಪರ್ಕಿಸಬಹುದು.</p>.<p>‘ಸದ್ಯದಲ್ಲಿಯೇ ಬೋಧನಾ ಕೊಠಡಿಗಳು ಮತ್ತು ವಿದ್ಯಾರ್ಥಿನಿಲಯಗಳ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಸಂಪೂರ್ಣ ಕ್ಯಾಂಪಸ್ ನಿರ್ಮಾಣದ ನಂತರ ಜಿಟಿಟಿಸಿ ಕೇಂದ್ರದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ಡಿಪ್ಲೊಮಾ ಕೋರ್ಸ್ಗಳನ್ನು ಆಯೋಜಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ಮಾರುತಿ ಭಜಂತ್ರಿ ಹೇಳಿದರು.</p>.<p><strong>ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿ </strong></p><p>ಪಟ್ಟಣದಲ್ಲಿ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ. ತಾಂತ್ರಿಕ ಹಾಗೂ ಅಲ್ಪಾವಧಿ ಕೈಗಾರಿಕಾ ತರಬೇತಿ ಆರಂಭಗೊಳ್ಳುತ್ತಿರುವುದು ಹರ್ಷದಾಯಕ. ಪೂರ್ಣ ಪ್ರಮಾಣದಲ್ಲಿ ಡಿಪ್ಲೊಮಾ ಕೋರ್ಸ್ ಬೇಗ ಆರಂಭವಾಗಬೇಕು- ಸಿದ್ದು ನಂದಿ ನರಗುಂದ, ನಾಗರಿಕರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>