ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ ಮತ್ತೆಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ

Last Updated 6 ಜೂನ್ 2020, 2:44 IST
ಅಕ್ಷರ ಗಾತ್ರ

ನರಗುಂದ: ಪಟ್ಟಣದಲ್ಲಿ ಕಳೆದ 8 ತಿಂಗಳುಗಳಿಂದ ಒಂದಿಲ್ಲೊಂದು ಪ್ರದೇಶದಲ್ಲಿ ಭೂಕುಸಿತವಾಗುತ್ತಿದೆ. ಬುಧವಾರ ರಾತ್ರಿ ಸಿದ್ದರಾಮೇಶ್ವರ ನಗರದ ರವಿ ಒಡ್ಡರ ಮನೆಯ ಅಡುಗೆ ಮನೆ ಭಾಗದಲ್ಲಿ 8 ಅಡಿಯಷ್ಟು ಭೂ ಕುಸಿತವಾಗಿದೆ.

ಆ ಸಂದರ್ಭದಲಿ ಅಡುಗೆಮನೆಯಲ್ಲಿ ಯಾರು ಇಲ್ಲದ ಪರಿಣಾ ಯಾವುದೇ ಅನಾಹತ ಸಂಭವಿಸಿಲ್ಲ. ಇದರಿಂದ ಈ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಹಾಗು ಸೋಮವಾರ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ಅಂಅತರ್ಜಲ ಹೆಚ್ಚಾಗಿಯೋ ಮತ್ತಾವುದೇ ಕಾರಣದಿಂದ ಈ ಕುಸಿತ ಉಂಟಾಗಿರುಬಹುದೆಂದು ಉಹಿಸಲಾಗುತ್ತಿದೆ. ಆದರೆ ಆಳದಲ್ಲಿ ನೀರು ಹರಿಯುತ್ತಿದೆ, ಇದರಿಂದ ಸುತ್ತಮುತ್ತಲಿನ ಜನತೆ ಭಯಗೊಂಡಿರುವುದು ಸಾಮಾನ್ಯವಾಗಿದೆ.

ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಕುಸಿತಗೊಂಡ ಮನೆಗೆ ಭೇಟಿ ನೀಡಿ ನಂತರ ಪುರಸಭೆ ಸಿಬ್ಬಂದಿಯಿಂದ ಆ ಕುಸಿ ಪ್ರದೇಶವನ್ನು ಸಂಪೂರ್ಣ ಮುಚ್ಚಿಸಿದ್ದಾರೆ. ಈ ರೀತಿ ಅನೇಕ ಕಡೆ ಕುಸಿತವಾಗುತ್ತಿದೆ, ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಎಲ್ಲ ವಿವರ ಸಂಗ್ರಹಿಸಿದ್ದಾರೆ. ಇನ್ನು ಸ್ಪಷ್ಟ ವರದಿ ಬರಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT