<p><strong>ನರಗುಂದ:</strong> ಪಟ್ಟಣದಲ್ಲಿ ಕಳೆದ 8 ತಿಂಗಳುಗಳಿಂದ ಒಂದಿಲ್ಲೊಂದು ಪ್ರದೇಶದಲ್ಲಿ ಭೂಕುಸಿತವಾಗುತ್ತಿದೆ. ಬುಧವಾರ ರಾತ್ರಿ ಸಿದ್ದರಾಮೇಶ್ವರ ನಗರದ ರವಿ ಒಡ್ಡರ ಮನೆಯ ಅಡುಗೆ ಮನೆ ಭಾಗದಲ್ಲಿ 8 ಅಡಿಯಷ್ಟು ಭೂ ಕುಸಿತವಾಗಿದೆ.</p>.<p>ಆ ಸಂದರ್ಭದಲಿ ಅಡುಗೆಮನೆಯಲ್ಲಿ ಯಾರು ಇಲ್ಲದ ಪರಿಣಾ ಯಾವುದೇ ಅನಾಹತ ಸಂಭವಿಸಿಲ್ಲ. ಇದರಿಂದ ಈ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಹಾಗು ಸೋಮವಾರ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ಅಂಅತರ್ಜಲ ಹೆಚ್ಚಾಗಿಯೋ ಮತ್ತಾವುದೇ ಕಾರಣದಿಂದ ಈ ಕುಸಿತ ಉಂಟಾಗಿರುಬಹುದೆಂದು ಉಹಿಸಲಾಗುತ್ತಿದೆ. ಆದರೆ ಆಳದಲ್ಲಿ ನೀರು ಹರಿಯುತ್ತಿದೆ, ಇದರಿಂದ ಸುತ್ತಮುತ್ತಲಿನ ಜನತೆ ಭಯಗೊಂಡಿರುವುದು ಸಾಮಾನ್ಯವಾಗಿದೆ.</p>.<p>ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಕುಸಿತಗೊಂಡ ಮನೆಗೆ ಭೇಟಿ ನೀಡಿ ನಂತರ ಪುರಸಭೆ ಸಿಬ್ಬಂದಿಯಿಂದ ಆ ಕುಸಿ ಪ್ರದೇಶವನ್ನು ಸಂಪೂರ್ಣ ಮುಚ್ಚಿಸಿದ್ದಾರೆ. ಈ ರೀತಿ ಅನೇಕ ಕಡೆ ಕುಸಿತವಾಗುತ್ತಿದೆ, ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಎಲ್ಲ ವಿವರ ಸಂಗ್ರಹಿಸಿದ್ದಾರೆ. ಇನ್ನು ಸ್ಪಷ್ಟ ವರದಿ ಬರಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಪಟ್ಟಣದಲ್ಲಿ ಕಳೆದ 8 ತಿಂಗಳುಗಳಿಂದ ಒಂದಿಲ್ಲೊಂದು ಪ್ರದೇಶದಲ್ಲಿ ಭೂಕುಸಿತವಾಗುತ್ತಿದೆ. ಬುಧವಾರ ರಾತ್ರಿ ಸಿದ್ದರಾಮೇಶ್ವರ ನಗರದ ರವಿ ಒಡ್ಡರ ಮನೆಯ ಅಡುಗೆ ಮನೆ ಭಾಗದಲ್ಲಿ 8 ಅಡಿಯಷ್ಟು ಭೂ ಕುಸಿತವಾಗಿದೆ.</p>.<p>ಆ ಸಂದರ್ಭದಲಿ ಅಡುಗೆಮನೆಯಲ್ಲಿ ಯಾರು ಇಲ್ಲದ ಪರಿಣಾ ಯಾವುದೇ ಅನಾಹತ ಸಂಭವಿಸಿಲ್ಲ. ಇದರಿಂದ ಈ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಹಾಗು ಸೋಮವಾರ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ಅಂಅತರ್ಜಲ ಹೆಚ್ಚಾಗಿಯೋ ಮತ್ತಾವುದೇ ಕಾರಣದಿಂದ ಈ ಕುಸಿತ ಉಂಟಾಗಿರುಬಹುದೆಂದು ಉಹಿಸಲಾಗುತ್ತಿದೆ. ಆದರೆ ಆಳದಲ್ಲಿ ನೀರು ಹರಿಯುತ್ತಿದೆ, ಇದರಿಂದ ಸುತ್ತಮುತ್ತಲಿನ ಜನತೆ ಭಯಗೊಂಡಿರುವುದು ಸಾಮಾನ್ಯವಾಗಿದೆ.</p>.<p>ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಕುಸಿತಗೊಂಡ ಮನೆಗೆ ಭೇಟಿ ನೀಡಿ ನಂತರ ಪುರಸಭೆ ಸಿಬ್ಬಂದಿಯಿಂದ ಆ ಕುಸಿ ಪ್ರದೇಶವನ್ನು ಸಂಪೂರ್ಣ ಮುಚ್ಚಿಸಿದ್ದಾರೆ. ಈ ರೀತಿ ಅನೇಕ ಕಡೆ ಕುಸಿತವಾಗುತ್ತಿದೆ, ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಎಲ್ಲ ವಿವರ ಸಂಗ್ರಹಿಸಿದ್ದಾರೆ. ಇನ್ನು ಸ್ಪಷ್ಟ ವರದಿ ಬರಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>