<p><strong>ನರೇಗಲ್</strong>: ಮಕರ ಸಂಕ್ರಾಂತಿ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಹಿಳೆಯರು ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.</p>.<p>ಅಕ್ಕಿ, ಕಡಲೆ, ಗೋಧಿ ಹಿಟ್ಟು, ತುಪ್ಪ, ಬೆಣ್ಣೆ, ಮೊಸರು, ಕಾಯಿಪಲ್ಯೆ, ಕಡಲೆ ಗಿಡ, ಕಬ್ಬು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ, ಕಡಲೆ ಹಿಟ್ಟು ಮುಂತಾದ ಖಾದ್ಯಗಳನ್ನು ಸೇರಿಸಿ ಮಹಿಳೆಯರಿಗೆ ಮರದ ಬಾಗಿನ ಅರ್ಪಿಸಿದರು.</p>.<p>ಮಹಿಳೆಯರು ಮರದ ಬಾಗಿನ ಅರ್ಪಿಸಿದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸಜ್ಜೆ ರೊಟ್ಟಿ, ಅವರಿಕಾಯಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಿದರು. </p>.<p>‘ಪೂರ್ವಜರು ದೇಹದ ಉಷ್ಣಾಂಶ ಸಮತೋಲನ ಕಾಪಾಡುವ ಉದ್ದೇಶದಿಂದ ಎಳ್ಳು ಮಿಶ್ರಿತ ಆಹಾರ ಪದ್ದತಿ ಅಳವಡಿಸಿಕೊಂಡಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ’ ಎಂದು ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿ ತಿಳಿಸಿದರು.</p>.<p>‘ಭೋಗಿ ಹಬ್ಬದ ಸುಗ್ಗಿಯಲ್ಲಿ ಹುಗ್ಗಿ’ ಎಂಬ ಮಾತು ಇಂದಿಗೂ ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದ್ದು, ಅದನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರೇಗಲ್</strong>: ಮಕರ ಸಂಕ್ರಾಂತಿ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಹಿಳೆಯರು ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.</p>.<p>ಅಕ್ಕಿ, ಕಡಲೆ, ಗೋಧಿ ಹಿಟ್ಟು, ತುಪ್ಪ, ಬೆಣ್ಣೆ, ಮೊಸರು, ಕಾಯಿಪಲ್ಯೆ, ಕಡಲೆ ಗಿಡ, ಕಬ್ಬು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ, ಕಡಲೆ ಹಿಟ್ಟು ಮುಂತಾದ ಖಾದ್ಯಗಳನ್ನು ಸೇರಿಸಿ ಮಹಿಳೆಯರಿಗೆ ಮರದ ಬಾಗಿನ ಅರ್ಪಿಸಿದರು.</p>.<p>ಮಹಿಳೆಯರು ಮರದ ಬಾಗಿನ ಅರ್ಪಿಸಿದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸಜ್ಜೆ ರೊಟ್ಟಿ, ಅವರಿಕಾಯಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಿದರು. </p>.<p>‘ಪೂರ್ವಜರು ದೇಹದ ಉಷ್ಣಾಂಶ ಸಮತೋಲನ ಕಾಪಾಡುವ ಉದ್ದೇಶದಿಂದ ಎಳ್ಳು ಮಿಶ್ರಿತ ಆಹಾರ ಪದ್ದತಿ ಅಳವಡಿಸಿಕೊಂಡಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ’ ಎಂದು ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿ ತಿಳಿಸಿದರು.</p>.<p>‘ಭೋಗಿ ಹಬ್ಬದ ಸುಗ್ಗಿಯಲ್ಲಿ ಹುಗ್ಗಿ’ ಎಂಬ ಮಾತು ಇಂದಿಗೂ ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದ್ದು, ಅದನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>