<p><strong>ನರಗುಂದ:</strong> ‘ಜಂಗಮರು ಸರ್ವಜನಾಂಗದವರಿಗೆ ಸಂಸ್ಕಾರ ನೀಡಿ ಸುಧಾರಣೆ ಬಯಸಿದವರು. ಜಂಗಮರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.</p>.<p>ಪಟ್ಟಣದ ಆರೂಢ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ, ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಜಂಗಮ ಸಮಾಜದ ಕೊಡುಗೆ ಅಪಾರ. ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಅಶಾಂತಿ ಹೆಚ್ಚಾಗಲಿದೆ. ಪ್ರತಿಯೊಬ್ಬರೂ ರೇಣುಕಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಾತನಾಡಿ, ‘ಜಂಗಮರು ಸಮಾಜಕ್ಕೆ ಲಿಂಗಧಾರಣೆ ಮಹತ್ವ ತಿಳಿಸಬೇಕು’ ಎಂದರು.</p>.<p>ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರು, ‘ರೇಣುಕಾಚಾರ್ಯರು ಮನಕುಲಕ್ಕೆ ಸಂಸ್ಕಾರ, ಧರ್ಮವನ್ನು ರೂಡಿಸಿದರು. ಸರ್ಕಾರ ಮಾಡದ ಜನಸೇವೆಯನ್ನು ಮಠಗಳು ನಡೆಸುತ್ತಿವೆ’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ‘ಮಹಾನ್ ಪುರುಷರ ಜಯಂತಿಗಳು ಆಚರಣೆಗೆ ಸಿಮೀತವಾಗದೇ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.</p>.<p>ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಬಾಬಾಸಾಹೇಬರ ಅರಮನೆ ಆವರಣದಿಂದ ಸಕಲ ವಾಧ್ಯಮೇಳದೊಂದಿಗೆ ಆರಂಭವಾಗಿ ಆರೂಢ ಜ್ಯೋತಿ ಭವನ ತಲುಪಿತು.</p>.<p>ದೀಪಾ ಗವಿಮಠ ಉಪನ್ಯಾಸ ನೀಡಿದರು. ನಂದೀಶ ಮಠದ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಕೊಣ್ಣೂರ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಬನಹಟ್ಟಿಯ ಸೊಲಬಯ್ಯ ಸ್ವಾಮೀಜಿ, ಬಿಇಒ ಎಚ್.ಎಂ. ಕಂಬಳಿ, ಎನ್.ಆರ್. ನೀಡಗುಂದಿ, ಆನಂದ ಬನಪ್ಪನವರ ಇದ್ದರು. ಗಿರೀಶ ದಾಸರ ನಿರೂಪಿಸಿ, ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ‘ಜಂಗಮರು ಸರ್ವಜನಾಂಗದವರಿಗೆ ಸಂಸ್ಕಾರ ನೀಡಿ ಸುಧಾರಣೆ ಬಯಸಿದವರು. ಜಂಗಮರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.</p>.<p>ಪಟ್ಟಣದ ಆರೂಢ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ, ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಜಂಗಮ ಸಮಾಜದ ಕೊಡುಗೆ ಅಪಾರ. ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಅಶಾಂತಿ ಹೆಚ್ಚಾಗಲಿದೆ. ಪ್ರತಿಯೊಬ್ಬರೂ ರೇಣುಕಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಾತನಾಡಿ, ‘ಜಂಗಮರು ಸಮಾಜಕ್ಕೆ ಲಿಂಗಧಾರಣೆ ಮಹತ್ವ ತಿಳಿಸಬೇಕು’ ಎಂದರು.</p>.<p>ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರು, ‘ರೇಣುಕಾಚಾರ್ಯರು ಮನಕುಲಕ್ಕೆ ಸಂಸ್ಕಾರ, ಧರ್ಮವನ್ನು ರೂಡಿಸಿದರು. ಸರ್ಕಾರ ಮಾಡದ ಜನಸೇವೆಯನ್ನು ಮಠಗಳು ನಡೆಸುತ್ತಿವೆ’ ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ‘ಮಹಾನ್ ಪುರುಷರ ಜಯಂತಿಗಳು ಆಚರಣೆಗೆ ಸಿಮೀತವಾಗದೇ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.</p>.<p>ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಬಾಬಾಸಾಹೇಬರ ಅರಮನೆ ಆವರಣದಿಂದ ಸಕಲ ವಾಧ್ಯಮೇಳದೊಂದಿಗೆ ಆರಂಭವಾಗಿ ಆರೂಢ ಜ್ಯೋತಿ ಭವನ ತಲುಪಿತು.</p>.<p>ದೀಪಾ ಗವಿಮಠ ಉಪನ್ಯಾಸ ನೀಡಿದರು. ನಂದೀಶ ಮಠದ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಕೊಣ್ಣೂರ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಬನಹಟ್ಟಿಯ ಸೊಲಬಯ್ಯ ಸ್ವಾಮೀಜಿ, ಬಿಇಒ ಎಚ್.ಎಂ. ಕಂಬಳಿ, ಎನ್.ಆರ್. ನೀಡಗುಂದಿ, ಆನಂದ ಬನಪ್ಪನವರ ಇದ್ದರು. ಗಿರೀಶ ದಾಸರ ನಿರೂಪಿಸಿ, ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>