<p><strong>ಗದಗ</strong>: ‘ನಾವು ಪತ್ರಿಕೆ ವಿತರಕರಾದರೂ ಪತ್ರಿಕಾ ಧರ್ಮ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಪತ್ರಿಕಾ ವಿತರಕರಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು’ ಎಂದು ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ ಕಂದಗಲ್ಲ ಹೇಳಿದರು.</p>.<p>ನಗರದ ರೋಟರಿ ಐ ಕೇರ್ ಸೆಂಟರ್ನಲ್ಲಿ ಶನಿವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಂಘದ ಸದಸ್ಯರ ಚಟುವಟಿಕೆಗಳಿಗೆ ಒಂದು ಸ್ವಂತ ಕಚೇರಿ ಹೊಂದುವ ಉದ್ದೇಶ ಇದ್ದು, ಜಿಲ್ಲಾಡಳಿತ ನಿವೇಶನ ಒದಗಿಸಲು ಕ್ರಮವಹಿಸಬೇಕು. ಈ ಸಂಬಂಧ ನಾವು ನಗರಾಭಿವೃದ್ಧಿ ಪ್ರಾಧಿಕಾರವನ್ನೂ ಸಂಪರ್ಕಿಸಿದ್ದೇವೆ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ‘ಸುದ್ದಿ ಸಂಗ್ರಹದಿಂದ ಹಿಡಿದುಒಂದು ಪತ್ರಿಕೆಯನ್ನು ಓದುಗರಿಗೆ ತಲುಪಿಸುವರೆಗಿನ ಕಾರ್ಯ ಒಂದು ಸಾಂಘಿಕ ಪ್ರಯತ್ನ. ಇದರಲ್ಲಿ ಪತ್ರಿಕಾ ವಿತರಕರ ಪಾತ್ರವೂ ಮಹತ್ವದ್ದು’ ಎಂದು ಹೇಳಿದರು.</p>.<p>‘ಪತ್ರಿಕಾ ಕ್ಷೇತ್ರದಲ್ಲಿ ಪರಸ್ಪರ ಅವಲಂಬನೆ ಹೆಚ್ಚು. ನನ್ನಿಂದಲೇ ಎಂಬ ಅಹಂಕಾರ ಯಾರಿಗೂ ಇರಬಾರದು. ಸಂಘವು ಸಂಘದ ಸದಸ್ಯರ ಹಿತ ಕಾಪಾಡಲು ಬದ್ಧವಾಗಿರಬೇಕು’ ಎಂದು ಸಲಹೆ ನೀಡಿದರು.</p>.<p>ಯುವ ಮುಖಂಡ ಕಿಶನ್ ಮೇರವಾಡೆ ಮಾತನಾಡಿ, ‘ಪತ್ರಿಕೆ ಹಂಚುವ ಹುಡುಗರು ಕಷ್ಟ ಸುಖಗಳ ಅರಿವಿದೆ. ಪ್ರತಿನಿತ್ಯ ನಿಷ್ಠೆಯಿಂದ ದುಡಿಯುವ ವಿತರಕರಿಗೆ ಸರ್ಕಾರ ಬ್ಯಾಟರಿ ಚಾಲಿತ ವಾಹನ ನೀಡಬೇಕು. ಅದನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.</p>.<p>ಯುವ ಉದ್ಯಮಿ ರಾಜು ಮೃತ್ಯುಂಜಯ ಸಂಕೇಶ್ವರ ಮಾತನಾಡಿ, ‘ಕೋವಿಡ್ ಸಂಕಷ್ಟದಲ್ಲೂ ಜನತೆಗೆ ಮಾಹಿತಿ ಮನೆಬಾಗಿಲಿಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಕಾರ್ಯ ಅತ್ಯಂತ ಮಹತ್ವದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ವಿಶ್ವಾಸಾರ್ಹವಲ್ಲ. ಪತ್ರಿಕೆಯಲ್ಲಿನ ಮಾಹಿತಿ ಮಾತ್ರ ನಿಖರವಾದುದು’ ಎಂದು ಹೇಳಿದರು.</p>.<p>ಶಂಕರ ಕುದರಿಮೋತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಗಳೇ ನಮ್ಮ ಅನ್ನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.</p>.<p>ಅಜಿತ ಹೊಂಬಾಳಿ, ಟಿ.ಎನ್. ಭಾಂಡಗೆ ವೇದಿಕೆಯಲ್ಲಿದ್ದರು.</p>.<p>ಸಂಘದ ಕಾರ್ಯದರ್ಶಿ ಮಹಾದೇವ ಹದ್ದಣ್ಣವರ ಸ್ವಾಗತಿಸಿದರು. ವಿರಕ್ತಮಠ ನಿರೂಪಿಸಿದರು. ಸಿದ್ದು ಮಡಿವಾಳರ, ವಿನಾಯಕ ಬದಿ, ಮಂಜುನಾಥ ಕುಬನೂರ, ದಶರಥ ಹೊನ್ನಳ್ಳಿ, ಜೋಶಿ, ಈರಣ್ಣ ಮಳೇಕರ ಸೇರಿದಂತೆ ಎಲ್ಲ ಪತ್ರಿಕಾ ವಿತರಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ನಾವು ಪತ್ರಿಕೆ ವಿತರಕರಾದರೂ ಪತ್ರಿಕಾ ಧರ್ಮ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಪತ್ರಿಕಾ ವಿತರಕರಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು’ ಎಂದು ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ ಕಂದಗಲ್ಲ ಹೇಳಿದರು.</p>.<p>ನಗರದ ರೋಟರಿ ಐ ಕೇರ್ ಸೆಂಟರ್ನಲ್ಲಿ ಶನಿವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಂಘದ ಸದಸ್ಯರ ಚಟುವಟಿಕೆಗಳಿಗೆ ಒಂದು ಸ್ವಂತ ಕಚೇರಿ ಹೊಂದುವ ಉದ್ದೇಶ ಇದ್ದು, ಜಿಲ್ಲಾಡಳಿತ ನಿವೇಶನ ಒದಗಿಸಲು ಕ್ರಮವಹಿಸಬೇಕು. ಈ ಸಂಬಂಧ ನಾವು ನಗರಾಭಿವೃದ್ಧಿ ಪ್ರಾಧಿಕಾರವನ್ನೂ ಸಂಪರ್ಕಿಸಿದ್ದೇವೆ’ ಎಂದು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ‘ಸುದ್ದಿ ಸಂಗ್ರಹದಿಂದ ಹಿಡಿದುಒಂದು ಪತ್ರಿಕೆಯನ್ನು ಓದುಗರಿಗೆ ತಲುಪಿಸುವರೆಗಿನ ಕಾರ್ಯ ಒಂದು ಸಾಂಘಿಕ ಪ್ರಯತ್ನ. ಇದರಲ್ಲಿ ಪತ್ರಿಕಾ ವಿತರಕರ ಪಾತ್ರವೂ ಮಹತ್ವದ್ದು’ ಎಂದು ಹೇಳಿದರು.</p>.<p>‘ಪತ್ರಿಕಾ ಕ್ಷೇತ್ರದಲ್ಲಿ ಪರಸ್ಪರ ಅವಲಂಬನೆ ಹೆಚ್ಚು. ನನ್ನಿಂದಲೇ ಎಂಬ ಅಹಂಕಾರ ಯಾರಿಗೂ ಇರಬಾರದು. ಸಂಘವು ಸಂಘದ ಸದಸ್ಯರ ಹಿತ ಕಾಪಾಡಲು ಬದ್ಧವಾಗಿರಬೇಕು’ ಎಂದು ಸಲಹೆ ನೀಡಿದರು.</p>.<p>ಯುವ ಮುಖಂಡ ಕಿಶನ್ ಮೇರವಾಡೆ ಮಾತನಾಡಿ, ‘ಪತ್ರಿಕೆ ಹಂಚುವ ಹುಡುಗರು ಕಷ್ಟ ಸುಖಗಳ ಅರಿವಿದೆ. ಪ್ರತಿನಿತ್ಯ ನಿಷ್ಠೆಯಿಂದ ದುಡಿಯುವ ವಿತರಕರಿಗೆ ಸರ್ಕಾರ ಬ್ಯಾಟರಿ ಚಾಲಿತ ವಾಹನ ನೀಡಬೇಕು. ಅದನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.</p>.<p>ಯುವ ಉದ್ಯಮಿ ರಾಜು ಮೃತ್ಯುಂಜಯ ಸಂಕೇಶ್ವರ ಮಾತನಾಡಿ, ‘ಕೋವಿಡ್ ಸಂಕಷ್ಟದಲ್ಲೂ ಜನತೆಗೆ ಮಾಹಿತಿ ಮನೆಬಾಗಿಲಿಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಕಾರ್ಯ ಅತ್ಯಂತ ಮಹತ್ವದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ವಿಶ್ವಾಸಾರ್ಹವಲ್ಲ. ಪತ್ರಿಕೆಯಲ್ಲಿನ ಮಾಹಿತಿ ಮಾತ್ರ ನಿಖರವಾದುದು’ ಎಂದು ಹೇಳಿದರು.</p>.<p>ಶಂಕರ ಕುದರಿಮೋತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಗಳೇ ನಮ್ಮ ಅನ್ನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.</p>.<p>ಅಜಿತ ಹೊಂಬಾಳಿ, ಟಿ.ಎನ್. ಭಾಂಡಗೆ ವೇದಿಕೆಯಲ್ಲಿದ್ದರು.</p>.<p>ಸಂಘದ ಕಾರ್ಯದರ್ಶಿ ಮಹಾದೇವ ಹದ್ದಣ್ಣವರ ಸ್ವಾಗತಿಸಿದರು. ವಿರಕ್ತಮಠ ನಿರೂಪಿಸಿದರು. ಸಿದ್ದು ಮಡಿವಾಳರ, ವಿನಾಯಕ ಬದಿ, ಮಂಜುನಾಥ ಕುಬನೂರ, ದಶರಥ ಹೊನ್ನಳ್ಳಿ, ಜೋಶಿ, ಈರಣ್ಣ ಮಳೇಕರ ಸೇರಿದಂತೆ ಎಲ್ಲ ಪತ್ರಿಕಾ ವಿತರಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>