ಪ್ರವಾಹ ಹಚ್ಚಿದ್ದರಿಂದ ತೇಲಿ ಹೋದ ಅವರು ನದಿ ಮಧ್ಯಭಾಗದಲ್ಲಿ ಮುಳ್ಳುಕಂಟಿ ಹಿಡಿದುಕೊಂಡು ಸುಮಾರು ಮೂರು ತಾಸಿಗೂ ಹೆಚ್ಚು ಹೊತ್ತು ಅಲ್ಲಿಯೇ ಇದ್ದರು. ನೀರು ಹೆಚ್ಚಾಗಿ, ಅವರು ಕುಳಿತ ಸ್ಥಳ ನಡುಗಡ್ಡೆಯಾಗಿ ಮಾರ್ಪಟ್ಟಿತ್ತು. ತಾವು ಕುಳಿತ ಕಂಟಿಯು ನೀರಲ್ಲಿ ಕೊಚ್ಚಿಹೋಗುವ ಭೀತಿ ಉಂಟಾಗಿ ರಕ್ಷಣೆಗೆ ಅಂಗಲಾಚಿದರು. ಇದನ್ನು ಗಮನಿಸಿದ ಕೊಣ್ಣೂರ ಹಾಗೂ ಗೋವನಕೊಪ್ಪ
ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.