ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಕಾರಣ ನ್ಯಾಯಾಲಯದ ಆದೇಶದಂತೆ ಲೋಕ ಅದಾಲತ್ನಲ್ಲಿ ಮಾಲೀಕ ಮತ್ತು ನಿವೇಶನ ಹೊಂದಿದವರ ಮಧ್ಯೆ ರಾಜಿ ಸಂಧಾನ ನಡೆಸಿ 2016-17ರಲ್ಲಿ ಅಂದಿನ ಪಿಡಿಒ ನಿವೇಶನ ಹೊಂದಿದ ಬಹುತೇಕರಿಗೆ ಇ-ಸ್ವತ್ತು ಉತಾರ ನೀಡಿದ್ದಾರೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಉಳಿದ ಫಲಾನುಭವಿಗಳಿಗೆ ಲೋಕ ಅದಾಲತ್ ಆದೇಶದಂತೆ ಇ-ಸ್ವತ್ತು ಉತಾರ ನೀಡಲು ನಿರಾಕರಿಸುತ್ತಿದ್ದು, ಕಟ್ಟಡ ಪರವಾನಗಿ ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫಲಾನುಭವಿಗಳು ಆರೋಪಿಸಿದರು.