<p><strong>ಶಿರಹಟ್ಟಿ</strong>: ಇ-ಸ್ವತ್ತು ಉತಾರ ಹೊಂದಿರುವವರಿಗೆ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಆಗ್ರಹಿಸಿ 70ಕ್ಕೂ ಅಧಿಕ ಗ್ರಾಮಸ್ಥರು ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರು ಸತ್ಯಾಗ್ರಹ ನಡೆಸಿದರು.</p>.<p>ಪ್ರತಿಭಟನೆ ಕೈಗೊಂಡ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರದ ಹಿನ್ನಲೆಯಲ್ಲಿ ಹತಾಶರಾದ ಪ್ರತಿಭಟನಾಕಾರರು ಸೋಮವಾರದ ಒಳಗೆ ಕಟ್ಟಡ ಪರವಾನಗಿ ನೀಡದಿದ್ದರೆ ಸರಣಿ ಸತ್ಯಾಗ್ರಹ ನಡೆಸುವುದಾಗಿ ಈ ಮೊದಲೇ ಎಚ್ಚರಿಸಿದ್ದರು. ಅದರಂತೆ ಗ್ರಾಮ ಪಂಚಾಯ್ತಿಗೆ ಬಂದ ಸಾರ್ವಜನಿಕರು ಪರವಾನಗಿ ಸಿಗದ ಕಾರಣ ಗ್ರಾಮ ಪಂಚಾಯ್ತಿ ಎದುರು ಪೆಂಡಾಲ್ ಹಾಕುವುದರೊಂದಿಗೆ ಸರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.</p>.<p>ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಕಾರಣ ನ್ಯಾಯಾಲಯದ ಆದೇಶದಂತೆ ಲೋಕ ಅದಾಲತ್ನಲ್ಲಿ ಮಾಲೀಕ ಮತ್ತು ನಿವೇಶನ ಹೊಂದಿದವರ ಮಧ್ಯೆ ರಾಜಿ ಸಂಧಾನ ನಡೆಸಿ 2016-17ರಲ್ಲಿ ಅಂದಿನ ಪಿಡಿಒ ನಿವೇಶನ ಹೊಂದಿದ ಬಹುತೇಕರಿಗೆ ಇ-ಸ್ವತ್ತು ಉತಾರ ನೀಡಿದ್ದಾರೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಉಳಿದ ಫಲಾನುಭವಿಗಳಿಗೆ ಲೋಕ ಅದಾಲತ್ ಆದೇಶದಂತೆ ಇ-ಸ್ವತ್ತು ಉತಾರ ನೀಡಲು ನಿರಾಕರಿಸುತ್ತಿದ್ದು, ಕಟ್ಟಡ ಪರವಾನಗಿ ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫಲಾನುಭವಿಗಳು ಆರೋಪಿಸಿದರು.</p>.<p>ಸ್ಥಳಕ್ಕೆ ಬಂದ ಪೊಲೀಸರು ಸರಣಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ಪ್ರತಿಭಟನಕಾರರು, ‘ನಮಗೆ ನ್ಯಾಯ ಸಿಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಎಲ್ಲರೂ ಮಂಗಳವಾರ ಪೊಲೀಸ್ ಠಾಣೆಗೆ ಬನ್ನಿ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಪೊಲೀಸರು ಪ್ರತಿಭಟನಕಾರರಿಗೆ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಹಟ್ಟಿ</strong>: ಇ-ಸ್ವತ್ತು ಉತಾರ ಹೊಂದಿರುವವರಿಗೆ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಆಗ್ರಹಿಸಿ 70ಕ್ಕೂ ಅಧಿಕ ಗ್ರಾಮಸ್ಥರು ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರು ಸತ್ಯಾಗ್ರಹ ನಡೆಸಿದರು.</p>.<p>ಪ್ರತಿಭಟನೆ ಕೈಗೊಂಡ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರದ ಹಿನ್ನಲೆಯಲ್ಲಿ ಹತಾಶರಾದ ಪ್ರತಿಭಟನಾಕಾರರು ಸೋಮವಾರದ ಒಳಗೆ ಕಟ್ಟಡ ಪರವಾನಗಿ ನೀಡದಿದ್ದರೆ ಸರಣಿ ಸತ್ಯಾಗ್ರಹ ನಡೆಸುವುದಾಗಿ ಈ ಮೊದಲೇ ಎಚ್ಚರಿಸಿದ್ದರು. ಅದರಂತೆ ಗ್ರಾಮ ಪಂಚಾಯ್ತಿಗೆ ಬಂದ ಸಾರ್ವಜನಿಕರು ಪರವಾನಗಿ ಸಿಗದ ಕಾರಣ ಗ್ರಾಮ ಪಂಚಾಯ್ತಿ ಎದುರು ಪೆಂಡಾಲ್ ಹಾಕುವುದರೊಂದಿಗೆ ಸರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.</p>.<p>ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಕಾರಣ ನ್ಯಾಯಾಲಯದ ಆದೇಶದಂತೆ ಲೋಕ ಅದಾಲತ್ನಲ್ಲಿ ಮಾಲೀಕ ಮತ್ತು ನಿವೇಶನ ಹೊಂದಿದವರ ಮಧ್ಯೆ ರಾಜಿ ಸಂಧಾನ ನಡೆಸಿ 2016-17ರಲ್ಲಿ ಅಂದಿನ ಪಿಡಿಒ ನಿವೇಶನ ಹೊಂದಿದ ಬಹುತೇಕರಿಗೆ ಇ-ಸ್ವತ್ತು ಉತಾರ ನೀಡಿದ್ದಾರೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಉಳಿದ ಫಲಾನುಭವಿಗಳಿಗೆ ಲೋಕ ಅದಾಲತ್ ಆದೇಶದಂತೆ ಇ-ಸ್ವತ್ತು ಉತಾರ ನೀಡಲು ನಿರಾಕರಿಸುತ್ತಿದ್ದು, ಕಟ್ಟಡ ಪರವಾನಗಿ ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫಲಾನುಭವಿಗಳು ಆರೋಪಿಸಿದರು.</p>.<p>ಸ್ಥಳಕ್ಕೆ ಬಂದ ಪೊಲೀಸರು ಸರಣಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ಪ್ರತಿಭಟನಕಾರರು, ‘ನಮಗೆ ನ್ಯಾಯ ಸಿಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಎಲ್ಲರೂ ಮಂಗಳವಾರ ಪೊಲೀಸ್ ಠಾಣೆಗೆ ಬನ್ನಿ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಪೊಲೀಸರು ಪ್ರತಿಭಟನಕಾರರಿಗೆ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>