ರಡೇರನಾಗನೂರಿನ ಚಂದ್ರಗೌಡ, ಪದ್ಮಾವತಿ ದಂಪತಿಯ ಪುತ್ರರಾದ ರಾಮನಗೌಡ 2002ರಲ್ಲಿ ಚಂಡೀಗಢದ ಐಟಿಬಿಪಿ (ಇಂಡಿಯನ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಪೋರ್ಸ್)ಗೆ ನೇಮಕವಾಗಿದ್ದರು. 2006ರಲ್ಲಿ ಜಯಶ್ರೀ ಎನ್ನುವವರ ಜತೆ ವಿವಾಹವಾಗಿತ್ತು. ಉತ್ತರಾಖಂಡದ ಜೋಶಿಮಠ, ಆಸ್ಸಾಂ, ಸಿಕ್ಕಿಂ, ಮಿಜೋರಾಂ, ಚಂಡೀಗಢ ಸೇರಿ ದೇಶದ ವಿವಿಧೆಡೆ 22 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಯೋಧನ ಸಾವಿನಿಂದ ರಡ್ಡೇರನಾಗನೂರಿನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರ ರೋದನ ಹೇಳತೀರದಾಗಿದೆ. ಅಂತಿಮ ದರ್ಶನಕ್ಕೆ ಗ್ರಾಮದಲ್ಲಿ ಸಿದ್ಜತೆ ನಡೆದಿದೆ.