ನಸುಕಿನ 5 ಗಂಟೆ ಸುಮಾರಿಗೆ ಒಮ್ಮಲೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿತು. ಮಳಿಗೆಗಳಲ್ಲಿ, ಮಾರುಕಟ್ಟೆಯ ಒಳಗೆ ಮಲಗಿದ್ದ ಕೆಲವು ಕಾರ್ಮಿಕರು ಬೆಂಕಿಯ ಝಳದಿಂದ ಎಚ್ಚರಗೊಂಡು, ಭಯದಿಂದ ಕೂಗುತ್ತಾ ಹೊರಗೋಡಿ ಬಂದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ‘ಆದರೆ, ಅಷ್ಟರಲ್ಲಾಗಲೇ, ಒಂದಕ್ಕೊಂದು ಹೊಂದಿಕೊಂಡಿರುವ ಮಳಿಗೆಗಳು ಸುಟ್ಟು ಕರಕಲಾಗಿದ್ದವು. ಹಣ್ಣು, ತರಕಾರಿ,ಕಿರಾಣಿ ಸಾಮಗ್ರಿ, ಬಿತ್ತನೆ ಬೀಜಗಳು ಸೇರಿದಂತೆ ₹1 ಕೋಟಿಗೂ ಹೆಚ್ಚಿನ ಹಾನಿಯಾಗಿದೆ’ ಎಂದು ಜಿಲ್ಲಾ ಕಾಳುಕಡಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಷಾಸಾಬ್ ಹೇಳಿದರು.