ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಶವಶೋಧಕ ಮೀನುಗಾರರನ್ನು ಈಚೆಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿದರು
ಪ್ರಾಣದ ಹಂಗು ತೊರೆದು ಮುಳುಗುವವರನ್ನು ಬದುಕಿಸಲು ಪ್ರಯತ್ನಿಸುತ್ತೇವೆ. ಮುಳುಗುವವರು ಬದುಕಿ ಬಂದರೆ ಅದಕ್ಕಿಂತ ಸಂತೋಷ ಬೇರಾವುದರಿಂದಲೂ ದೊರೆಯುವುದಿಲ್ಲ
ಮಹೇಶ ಕಿಳ್ಳಿಕ್ಯಾತರ ಕೊರ್ಲಹಳ್ಳಿ
ಪ್ರತಿಫಲ ಶೂನ್ಯ...
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೇವಲ ಮಾನವೀಯತೆ ದೃಷ್ಟಿಯಿಂದ ಶವ ಶೋಧನೆಗಿಳಿಯುವ ಮೀನುಗಾರರ ತಂಡವು ಮೃತರ ಕುಟುಂಬಕ್ಕೆ ಆಪದ್ಭಾಂದರಾಗಿದ್ದಾರೆ. ಹೀಗೆ ನೀರಿನಲ್ಲಿಳಿದು ಶವ ಶೋಧ ಕೈಗೊಳ್ಳುವ ಮೀನುಗಾರರಿಗೆ ಯಾವ ನೆರವು ಕೂಡ ದೊರೆಯುವುದಿಲ್ಲ. ಖಷಿ ಕೇಳುವ ಸಂದರ್ಭವೂ ಅದಲ್ಲ. ಹೀಗಾಗಿ ಮೀನುಗಾರರು ತಮ್ಮ ದುಡಿಮೆ ಬಿಟ್ಟು ಶವ ಶೋಧ ಕಾರ್ಯಕೈಗೊಳ್ಳುವುದಕ್ಕೆ ಯಾವುದಾದರೂ ಮೂಲದಿಂದ ನೆರವು ದೊರೆಯಬೇಕು ಎನ್ನುವುದು ಗ್ರಾಮಸ್ಥರ ಅಪೇಕ್ಷೆಯಾಗಿದೆ.