‘ಕೊರೊನಾ ಸೋಂಕು ಇಂದು ಜಗತ್ತನ್ನು ತಲ್ಲಣಗೊಳಿಸಿದೆ. ಇದು ಭೀಕರ ಸಾಂಕ್ರಾಮಿಕ ರೋಗವಾಗಿದೆ. ದೇಶದಾದ್ಯಂತ ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜನರು ಗುಂಪು ಕೂಡುವುದನ್ನು ಸರ್ಕಾರ ನಿಷೇಧಿಸಿವೆ. ಜನರು ಜಾತ್ರಾ ಮಹೋತ್ಸವದಲ್ಲಿ ಗುಂಪುಗೂಡಬಾರದು, ಈ ಸೋಂಕು ಜನರಿಗೆ ಹರಡಬಾರದು ಎಂಬ ಕಾರಣಕ್ಕೆ ರಥೋತ್ಸವ ಸೇರಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ’ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.