<p><strong>ಗಜೇಂದ್ರಗಡ: </strong>ತಾಯಂದಿರ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ `ಜನನಿ ಸುರಕ್ಷಾ~ ಯೋಜನೆಗೆ ಆಯ್ಕೆಗೊಂಡ ಅರ್ಹ ನೂರಾರು ಫಲಾನುಭವಿ ಗಳಿಗೆ ಸಹಾಯ ಧನ ದೊರೆತಿಲ್ಲ. ಪರಿಣಾಮ ಸರ್ಕಾರದ ಸಹಾಯ ಧನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳು ಕೈಕೈಹಿಸುಕಿಕೊಳ್ಳು ವಂತಾಗಿದೆ.<br /> <br /> ರಾಜ್ಯದಲ್ಲಿ ಹೆಚ್ಚುತ್ತಿರುವ ತಾಯಂದಿರ ಮತ್ತು ಶಿಶು ಮರಣ ಪ್ರಮಾಣಕ್ಕೆ ಕಡಿವಾಣ ಹಾಕುವುದರ ಜೊತೆಗೆ ಬಡವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ `ಜನನಿ ಸುರಕ್ಷಾ~ ಎಂಬ ಮಹತ್ವಾ ಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿತು.<br /> <br /> `ಜನನಿ ಸುರಕ್ಷಾ~ ಯೋಜನೆ ಜಾರಿಗೊಳ್ಳುವು ದಕ್ಕಿಂತ ಪೂರ್ವದಲ್ಲಿ ರೋಣ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆಯರು ಆರೋಗ್ಯ ಕೇಂದ್ರಗಳಿಗೆ ಸಮರ್ಪಕ ಚಿಕಿತ್ಸೆ ಪಡೆಯದೇ ಮನೆಯಲ್ಲಿಯೇ ಹೆರಿಗೆಗೆ ಒಳಪಡುತ್ತಿದ್ದರು. <br /> <br /> ಪರಿಣಾಮ ಕೆಲವೊಮ್ಮೆ ಅವೈ ಜ್ಞಾನಿಕ ಹೆರಿಗೆ ಪದ್ದತಿಯಿಂದಾಗಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದ್ದವು. ಯೋಜನೆಯಡಿ ಹೆರಿಗೆ ಮಾಡಿಸಿ ಕೊಂಡ ಗರ್ಭಿಣಿಯರಿಗೆ ಸರ್ಕಾರ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ1,500 ರ ವರೆಗೆ (ವಿವಿಧ ಬಗೆಯ ಹೆರಿಗೆಗೆ ಸಂಬಂಧಿಸಿದಂತೆ) ಸಹಾಯ ಧನ ನೀಡಲಾರಂಭಿಸಿತು. <br /> <br /> ಇದರಿಂದ ಆಕರ್ಷಿತರಾದ ಗರ್ಭಿಣಿಯರು ಗರ್ಭಾವಸ್ಥೆಯ ಆರಂಭದ ದಿನಗಳಿಂದಲ್ಲೂ ಸರ್ಕಾರಿ ಆಸ್ಪತ್ರೆ ಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕೇಂದ್ರಗಳಲ್ಲಿಯೇ ಹೆರಿಗೆಗೆ ಮುಂದಾಗುತ್ತಿದ್ದಾರೆ. ಆದರೆ, ಯೋಜನೆಯಡಿಯಲ್ಲಿನ ಸಹಾಯ ಧನ ಸಕಾಲಕ್ಕೆ ಫಲಾನುಭವಿಗಳ ಕೈಸೇರದಿರುವುದು ಫಲಾನುಭವಿಗಳಲ್ಲಿ ಬೇಸರ ಮೂಡಿಸಿದೆ.<br /> <br /> <strong> 275 ಫಲಾನುಭವಿಗಳಿಗೆ ಸಹಾಯ ಧನವಿಲ್ಲ:</strong> ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಒಟ್ಟು 275 ಫಲಾನುಭವಿಗಳಿಗೆ `ಜನನಿ ಸುರಕ್ಷಾ~ ಯೋಜನೆಯಡಿಯಲ್ಲಿ ಸಹಾಯ ಧನ ದೊರೆತಿಲ್ಲ. ಇದರಲ್ಲಿ 27 ಪರಿಶಿಷ್ಟ ಜಾತಿ, 04 ಪರಿಶಿಷ್ಟ ಪಂಗಡ ಹಾಗೂ 244 ಇತರೆ ವರ್ಗದ ಫಲಾನುಭವಿಗಳಿದ್ದಾರೆ. ಈ ಎಲ್ಲ ಫಲಾನುಭವಿ ಗಳಿಗೆ ಸರ್ಕಾರ ಒಟ್ಟು 2,10,300 ರೂ. ಸಹಾಯ ಧನ ನೀಡಬೇಕಾಗಿದೆ. ಈವರೆಗೂ ಬಿಡಿಗಾಸು ದೊರೆಯದಿರುವುದು ಫಲಾನುಭವಿ ಗಳ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> <strong>ಅರ್ಹತೆ: </strong>ಬಿಪಿಎಲ್ ಪಡಿತರ ಹೊಂದಿದ ಎಲ್ಲ ವರ್ಗದ ಗರ್ಭಿಣಿಯರಿಗೆ ದೊರೆಯುತ್ತದೆ. ವರ್ಷಕ್ಕೆ 17,000 ವಾರ್ಷಿಕ ಆದಾಯ ಹೊಂದಿ ರಬೇಕು. ಮಹಿಳೆ19 ವರ್ಷ ವಯಸ್ಸಾದ ನಂತರ ಗರ್ಭಿಣಿಯಾದರೆ 2 ಜೀವಂತ ಜನನಗಳಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಹೆರಿಗೆಗೆ ಮೊದಲು ಎರಡು ದನುರ್ವಾಯು ಲಸಿಕೆ ಹಾಗೂ ಕಬ್ಬಿನಾಂಶ ಮಾತ್ರೆ ಪಡೆದು ಕೊಳ್ಳಬೇಕು. ಗರ್ಭಿಣಿಯರು ಕನಿಷ್ಠ ಪಕ್ಷ ಮೂರು ಬಾರಿ ಯಾದರೂ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡಿ ರಬೇಕು. <br /> <br /> <strong>ಸೇವಾ ಯೋಜನೆಗಳೇನು?: </strong>ಬಿಪಿಎಲ್ ಪಡಿತರ ಹೊಂದಿರುವ ಕಡು ಬಡ ಕುಟುಂಬಕ್ಕೆ ಸೇರಿದ ಗರ್ಭಿಣಿಯು ಮನೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ 500 ರೂ. ಆರೋಗ್ರ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡ ಮಹಿಳೆಗೆ 700 ರೂ. (500+200) ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಆಸ್ಪತ್ರೆಯ ಸೇವೆ ಗರ್ಭಿಣಿಗೆ ಅಗತ್ಯವಿದ್ದಲ್ಲಿ 200 ಸಾರಿಗೆ ಭತ್ಯ ನೀಡಲಾಗುತ್ತದೆ. <br /> <br /> ಸಮುದಾಯ ಆರೋಗ್ರ ಕೇಂದ್ರಗಳಲ್ಲಿ ಗಂಡಾಂತರ ಹೆರಿಗೆ ಮಾಡಿಸಲು ಸರ್ಕಾರಿ ವೈದ್ಯರ ಸೇವೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಂಡು ಸಿಜೇರಿಯನ್ (ಶಸ್ತ್ರ ಚಿಕಿತ್ಸೆ) ಮಾಡಿಸಿಕೊಂಡ ಗರ್ಭಿಣಿ ಮಹಿಳೆಯರಿಗೆ 1,500 ರೂ. ಉದರ ದರ್ಶಕ/ ಟ್ಯುಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಅಂತವರಿಗೆ 175 ರೂ. ಪರಿಹಾರ ಧನ ನೀಡ ಲಾಗುವುದು. ತಕ್ಷಣ ಅರ್ಹ ಗರ್ಭಿಣಿಗೆ ಹಣ ವಿತರಿಸಲೆಂದು ಪ್ರತಿಯೊಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಬಳಿ 5,000 ರೂ. ಮುಂಗಡ ಹಣ ಇರುತ್ತದೆ. ಈ ಪೈಕಿ 1,500 ರೂ. ನಗದಾಗಿ ಯಾವಾಗಲೂ ಇರುತ್ತದೆ. <br /> <br /> ಸರ್ಕಾರಿ ನೌಕರರು ವೈದ್ಯಕೀಯ ಸೇವೆ ಪಡೆಯಲು ಅನುಮೋದಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ಫಲಾನುಭವಿಗಳು ಹೆರಿಗೆ ಸೌಲಭ್ಯ ಪಡೆಯಬಹುದು ಎಂದು ಇಲಾಖೆ ಹೇಳುತ್ತಿದೆಯಾದರೂ ಯಾವುದು ಕಾರ್ಯರೂಪಕ್ಕೆ ಬಾರದಿರುವುದು ಯೋಜನೆಗೆ ಹಿನ್ನಡೆಯನ್ನುಂಟು ಮಾಡಿದೆ. <br /> <br /> ಫಲಾನುಭವಿಗಳಿಗೆ ವಿತರಿಸಬೇಕಾದ ಅನುದಾನ ವನ್ನು ಸರ್ಕಾರ ಬಿಡುಗಡೆ ಗೊಳಿಸಿಲ್ಲ. ಅನುದಾನ ದೊರೆತ ಕೂಡಲೇ ವಿತರಿಸಲಾ ಗುವುದು ಎಂದು ರೋಣ ತಾಲ್ಲೂಕು `ಜನನಿ ಸುರಕ್ಷಾ~ ಯೋಜನಾಧಿಕಾರಿ ಸಿ.ಬಿ.ಮೆಟ್ಟಿಕಲ್ಲಿ ` ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ: </strong>ತಾಯಂದಿರ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ `ಜನನಿ ಸುರಕ್ಷಾ~ ಯೋಜನೆಗೆ ಆಯ್ಕೆಗೊಂಡ ಅರ್ಹ ನೂರಾರು ಫಲಾನುಭವಿ ಗಳಿಗೆ ಸಹಾಯ ಧನ ದೊರೆತಿಲ್ಲ. ಪರಿಣಾಮ ಸರ್ಕಾರದ ಸಹಾಯ ಧನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳು ಕೈಕೈಹಿಸುಕಿಕೊಳ್ಳು ವಂತಾಗಿದೆ.<br /> <br /> ರಾಜ್ಯದಲ್ಲಿ ಹೆಚ್ಚುತ್ತಿರುವ ತಾಯಂದಿರ ಮತ್ತು ಶಿಶು ಮರಣ ಪ್ರಮಾಣಕ್ಕೆ ಕಡಿವಾಣ ಹಾಕುವುದರ ಜೊತೆಗೆ ಬಡವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ `ಜನನಿ ಸುರಕ್ಷಾ~ ಎಂಬ ಮಹತ್ವಾ ಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿತು.<br /> <br /> `ಜನನಿ ಸುರಕ್ಷಾ~ ಯೋಜನೆ ಜಾರಿಗೊಳ್ಳುವು ದಕ್ಕಿಂತ ಪೂರ್ವದಲ್ಲಿ ರೋಣ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆಯರು ಆರೋಗ್ಯ ಕೇಂದ್ರಗಳಿಗೆ ಸಮರ್ಪಕ ಚಿಕಿತ್ಸೆ ಪಡೆಯದೇ ಮನೆಯಲ್ಲಿಯೇ ಹೆರಿಗೆಗೆ ಒಳಪಡುತ್ತಿದ್ದರು. <br /> <br /> ಪರಿಣಾಮ ಕೆಲವೊಮ್ಮೆ ಅವೈ ಜ್ಞಾನಿಕ ಹೆರಿಗೆ ಪದ್ದತಿಯಿಂದಾಗಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದ್ದವು. ಯೋಜನೆಯಡಿ ಹೆರಿಗೆ ಮಾಡಿಸಿ ಕೊಂಡ ಗರ್ಭಿಣಿಯರಿಗೆ ಸರ್ಕಾರ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ1,500 ರ ವರೆಗೆ (ವಿವಿಧ ಬಗೆಯ ಹೆರಿಗೆಗೆ ಸಂಬಂಧಿಸಿದಂತೆ) ಸಹಾಯ ಧನ ನೀಡಲಾರಂಭಿಸಿತು. <br /> <br /> ಇದರಿಂದ ಆಕರ್ಷಿತರಾದ ಗರ್ಭಿಣಿಯರು ಗರ್ಭಾವಸ್ಥೆಯ ಆರಂಭದ ದಿನಗಳಿಂದಲ್ಲೂ ಸರ್ಕಾರಿ ಆಸ್ಪತ್ರೆ ಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕೇಂದ್ರಗಳಲ್ಲಿಯೇ ಹೆರಿಗೆಗೆ ಮುಂದಾಗುತ್ತಿದ್ದಾರೆ. ಆದರೆ, ಯೋಜನೆಯಡಿಯಲ್ಲಿನ ಸಹಾಯ ಧನ ಸಕಾಲಕ್ಕೆ ಫಲಾನುಭವಿಗಳ ಕೈಸೇರದಿರುವುದು ಫಲಾನುಭವಿಗಳಲ್ಲಿ ಬೇಸರ ಮೂಡಿಸಿದೆ.<br /> <br /> <strong> 275 ಫಲಾನುಭವಿಗಳಿಗೆ ಸಹಾಯ ಧನವಿಲ್ಲ:</strong> ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಒಟ್ಟು 275 ಫಲಾನುಭವಿಗಳಿಗೆ `ಜನನಿ ಸುರಕ್ಷಾ~ ಯೋಜನೆಯಡಿಯಲ್ಲಿ ಸಹಾಯ ಧನ ದೊರೆತಿಲ್ಲ. ಇದರಲ್ಲಿ 27 ಪರಿಶಿಷ್ಟ ಜಾತಿ, 04 ಪರಿಶಿಷ್ಟ ಪಂಗಡ ಹಾಗೂ 244 ಇತರೆ ವರ್ಗದ ಫಲಾನುಭವಿಗಳಿದ್ದಾರೆ. ಈ ಎಲ್ಲ ಫಲಾನುಭವಿ ಗಳಿಗೆ ಸರ್ಕಾರ ಒಟ್ಟು 2,10,300 ರೂ. ಸಹಾಯ ಧನ ನೀಡಬೇಕಾಗಿದೆ. ಈವರೆಗೂ ಬಿಡಿಗಾಸು ದೊರೆಯದಿರುವುದು ಫಲಾನುಭವಿ ಗಳ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> <strong>ಅರ್ಹತೆ: </strong>ಬಿಪಿಎಲ್ ಪಡಿತರ ಹೊಂದಿದ ಎಲ್ಲ ವರ್ಗದ ಗರ್ಭಿಣಿಯರಿಗೆ ದೊರೆಯುತ್ತದೆ. ವರ್ಷಕ್ಕೆ 17,000 ವಾರ್ಷಿಕ ಆದಾಯ ಹೊಂದಿ ರಬೇಕು. ಮಹಿಳೆ19 ವರ್ಷ ವಯಸ್ಸಾದ ನಂತರ ಗರ್ಭಿಣಿಯಾದರೆ 2 ಜೀವಂತ ಜನನಗಳಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಹೆರಿಗೆಗೆ ಮೊದಲು ಎರಡು ದನುರ್ವಾಯು ಲಸಿಕೆ ಹಾಗೂ ಕಬ್ಬಿನಾಂಶ ಮಾತ್ರೆ ಪಡೆದು ಕೊಳ್ಳಬೇಕು. ಗರ್ಭಿಣಿಯರು ಕನಿಷ್ಠ ಪಕ್ಷ ಮೂರು ಬಾರಿ ಯಾದರೂ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡಿ ರಬೇಕು. <br /> <br /> <strong>ಸೇವಾ ಯೋಜನೆಗಳೇನು?: </strong>ಬಿಪಿಎಲ್ ಪಡಿತರ ಹೊಂದಿರುವ ಕಡು ಬಡ ಕುಟುಂಬಕ್ಕೆ ಸೇರಿದ ಗರ್ಭಿಣಿಯು ಮನೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ 500 ರೂ. ಆರೋಗ್ರ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡ ಮಹಿಳೆಗೆ 700 ರೂ. (500+200) ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಆಸ್ಪತ್ರೆಯ ಸೇವೆ ಗರ್ಭಿಣಿಗೆ ಅಗತ್ಯವಿದ್ದಲ್ಲಿ 200 ಸಾರಿಗೆ ಭತ್ಯ ನೀಡಲಾಗುತ್ತದೆ. <br /> <br /> ಸಮುದಾಯ ಆರೋಗ್ರ ಕೇಂದ್ರಗಳಲ್ಲಿ ಗಂಡಾಂತರ ಹೆರಿಗೆ ಮಾಡಿಸಲು ಸರ್ಕಾರಿ ವೈದ್ಯರ ಸೇವೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಂಡು ಸಿಜೇರಿಯನ್ (ಶಸ್ತ್ರ ಚಿಕಿತ್ಸೆ) ಮಾಡಿಸಿಕೊಂಡ ಗರ್ಭಿಣಿ ಮಹಿಳೆಯರಿಗೆ 1,500 ರೂ. ಉದರ ದರ್ಶಕ/ ಟ್ಯುಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಅಂತವರಿಗೆ 175 ರೂ. ಪರಿಹಾರ ಧನ ನೀಡ ಲಾಗುವುದು. ತಕ್ಷಣ ಅರ್ಹ ಗರ್ಭಿಣಿಗೆ ಹಣ ವಿತರಿಸಲೆಂದು ಪ್ರತಿಯೊಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಬಳಿ 5,000 ರೂ. ಮುಂಗಡ ಹಣ ಇರುತ್ತದೆ. ಈ ಪೈಕಿ 1,500 ರೂ. ನಗದಾಗಿ ಯಾವಾಗಲೂ ಇರುತ್ತದೆ. <br /> <br /> ಸರ್ಕಾರಿ ನೌಕರರು ವೈದ್ಯಕೀಯ ಸೇವೆ ಪಡೆಯಲು ಅನುಮೋದಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ಫಲಾನುಭವಿಗಳು ಹೆರಿಗೆ ಸೌಲಭ್ಯ ಪಡೆಯಬಹುದು ಎಂದು ಇಲಾಖೆ ಹೇಳುತ್ತಿದೆಯಾದರೂ ಯಾವುದು ಕಾರ್ಯರೂಪಕ್ಕೆ ಬಾರದಿರುವುದು ಯೋಜನೆಗೆ ಹಿನ್ನಡೆಯನ್ನುಂಟು ಮಾಡಿದೆ. <br /> <br /> ಫಲಾನುಭವಿಗಳಿಗೆ ವಿತರಿಸಬೇಕಾದ ಅನುದಾನ ವನ್ನು ಸರ್ಕಾರ ಬಿಡುಗಡೆ ಗೊಳಿಸಿಲ್ಲ. ಅನುದಾನ ದೊರೆತ ಕೂಡಲೇ ವಿತರಿಸಲಾ ಗುವುದು ಎಂದು ರೋಣ ತಾಲ್ಲೂಕು `ಜನನಿ ಸುರಕ್ಷಾ~ ಯೋಜನಾಧಿಕಾರಿ ಸಿ.ಬಿ.ಮೆಟ್ಟಿಕಲ್ಲಿ ` ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>