<p><strong>ಹಾಸನ: </strong>ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟು ₹1,54,37,940 ಹಣ ಸಂಗ್ರಹವಾಗಿದೆ.</p>.<p>ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹83,89,770 ಸಂಗ್ರಹವಾಗಿದ್ದರೆ, ಸಿದ್ದೇಶ್ವರ ದೇವಾಲಯದ ಒಂದು ಹುಂಡಿಯಿಂದ ₹6,50,355 ಕಾಣಿಕೆ ರೂಪದಲ್ಲಿಸಂಗ್ರಹವಾಗಿದೆ. ಅಲ್ಲದೆ, ಟಿಕೆಟ್ ಮಾರಾಟದಿಂದ ₹63,97,815 ಸಂಗ್ರಹವಾಗಿದೆ.</p>.<p>ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್, ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಸಿ.ಸಿ.ಟಿ.ವಿಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಿಗ್ಗೆ 8 ಗಂಟೆಗೆ ಹುಂಡಿ ಹಣ ಎಣಿಕೆ ಕಾರ್ಯ ಆರಂಭವಾಗಿ ಸಂಜೆ 4.30ಕ್ಕೆಮುಕ್ತಾಯಗೊಂಡಿತ್ತು.</p>.<p>ಅ.28ರಿಂದ ನ.6ರವರೆಗೆ ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು.ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ದೇವಾಲಯದಆಡಳಿತಾಧಿಕಾರಿ, ತಹಶೀಲ್ದಾರ್ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಹುಂಡಿ ಹಣವನ್ನು ಬ್ಯಾಂಕ್ಗೆ ಜಮಾಮಾಡಲಾಯಿತು.</p>.<p><strong>ಇದನ್ನೂ ಓದಿ:</strong><a href="https://cms.prajavani.net/district/hasana/let-the-husband-get-drunk-devotees-demand-to-god-hasanamba-882102.html" itemprop="url">ಹೆಣ್ಮಕ್ಕಳಿಗೆ ಮದ್ವೆ ಮಾಡಿಸು, ಗಂಡನ ಕುಡಿತ ಬಿಡಿಸು: ಹಾಸನಾಂಬೆಗೆ ಭಕ್ತರ ನಿವೇದನೆ </a></p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಕೋವಿಡ್ ಕಾರಣಕ್ಕೆ ಸಾರ್ವಜನಿಕ ದರ್ಶನ ನಿಷೇಧ ಮಾಡಲಾಗಿತ್ತು. ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹21,34,052 ಹಾಗೂ ಸಿದ್ದೇಶ್ವರ ದೇವಾಲಯದ ಹುಂಡಿಯಿಂದ ₹1,45,720ಸಂಗ್ರಹವಾಗಿತ್ತು.</p>.<p>2013ರಲ್ಲಿ ₹1.21 ಕೋಟಿ, 2014ರಲ್ಲಿ ₹1.27 ಕೋಟಿ, 2015ರಲ್ಲಿ ₹1.46 ಕೋಟಿ,2017ರಲ್ಲಿ ₹4.14 ಕೋಟಿ, 2018ರಲ್ಲಿ ₹2.68 ಕೋಟಿ, 2019ರಲ್ಲಿ ₹3.06 ಕೋಟಿಸಂಗ್ರಹವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟು ₹1,54,37,940 ಹಣ ಸಂಗ್ರಹವಾಗಿದೆ.</p>.<p>ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹83,89,770 ಸಂಗ್ರಹವಾಗಿದ್ದರೆ, ಸಿದ್ದೇಶ್ವರ ದೇವಾಲಯದ ಒಂದು ಹುಂಡಿಯಿಂದ ₹6,50,355 ಕಾಣಿಕೆ ರೂಪದಲ್ಲಿಸಂಗ್ರಹವಾಗಿದೆ. ಅಲ್ಲದೆ, ಟಿಕೆಟ್ ಮಾರಾಟದಿಂದ ₹63,97,815 ಸಂಗ್ರಹವಾಗಿದೆ.</p>.<p>ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್, ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಸಿ.ಸಿ.ಟಿ.ವಿಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಿಗ್ಗೆ 8 ಗಂಟೆಗೆ ಹುಂಡಿ ಹಣ ಎಣಿಕೆ ಕಾರ್ಯ ಆರಂಭವಾಗಿ ಸಂಜೆ 4.30ಕ್ಕೆಮುಕ್ತಾಯಗೊಂಡಿತ್ತು.</p>.<p>ಅ.28ರಿಂದ ನ.6ರವರೆಗೆ ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು.ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ದೇವಾಲಯದಆಡಳಿತಾಧಿಕಾರಿ, ತಹಶೀಲ್ದಾರ್ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಹುಂಡಿ ಹಣವನ್ನು ಬ್ಯಾಂಕ್ಗೆ ಜಮಾಮಾಡಲಾಯಿತು.</p>.<p><strong>ಇದನ್ನೂ ಓದಿ:</strong><a href="https://cms.prajavani.net/district/hasana/let-the-husband-get-drunk-devotees-demand-to-god-hasanamba-882102.html" itemprop="url">ಹೆಣ್ಮಕ್ಕಳಿಗೆ ಮದ್ವೆ ಮಾಡಿಸು, ಗಂಡನ ಕುಡಿತ ಬಿಡಿಸು: ಹಾಸನಾಂಬೆಗೆ ಭಕ್ತರ ನಿವೇದನೆ </a></p>.<p>ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಕೋವಿಡ್ ಕಾರಣಕ್ಕೆ ಸಾರ್ವಜನಿಕ ದರ್ಶನ ನಿಷೇಧ ಮಾಡಲಾಗಿತ್ತು. ಹಾಸನಾಂಬೆ ದೇವಾಲಯದ ಹುಂಡಿಗಳಿಂದ ₹21,34,052 ಹಾಗೂ ಸಿದ್ದೇಶ್ವರ ದೇವಾಲಯದ ಹುಂಡಿಯಿಂದ ₹1,45,720ಸಂಗ್ರಹವಾಗಿತ್ತು.</p>.<p>2013ರಲ್ಲಿ ₹1.21 ಕೋಟಿ, 2014ರಲ್ಲಿ ₹1.27 ಕೋಟಿ, 2015ರಲ್ಲಿ ₹1.46 ಕೋಟಿ,2017ರಲ್ಲಿ ₹4.14 ಕೋಟಿ, 2018ರಲ್ಲಿ ₹2.68 ಕೋಟಿ, 2019ರಲ್ಲಿ ₹3.06 ಕೋಟಿಸಂಗ್ರಹವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>