ಕೃತ್ಯ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ರಘು ಅವರು ಮಗನನ್ನು ಟ್ಯೂಶನ್ಗೆಂದು ಕರೆದುಕೊಂಡು ಹೋಗಿದ್ದರು.ಪತ್ನಿ ಹಾಗೂ ಅತ್ತೆ ಸಹ ಸಂಬಂಧಿಕರ ಮನೆಗೆಂದು ಹೊರತೆರಳಿದ್ದರು. ಹೀಗಾಗಿ ರಘು ಮನೆಗೆ ಬೀಗ ಹಾಕಿ ತೆರಳಿದ್ದರು. ಸಂಜೆ 7.45ಕ್ಕೆ ಮನೆ ಬಳಿಗೆ ಆಗಮಿಸಿದ ರಘುಅವರ ಭಾವ ಮೈದುನ ವರದರಾಜು ಎಂಬುವರು, ಮನೆಯ ಬಾಗಿಲು ತೆರೆದಿರುವುದನ್ನು ಕಂಡು ರಘು ಅವರಿಗೆಕರೆ ಮಾಡಿ ತಿಳಿಸಿದ್ದಾರೆ.