ಯಸಳೂರು ಮೀಸಲು ಅರಣ್ಯ ವ್ಯಾಪ್ತಿಯ ಮತ್ತೂರು ಬಳಿ ಆನೆಗಳ ಗುಂಪು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂತು. ಬಳಿಕ ನಾಗಾವರ ಆನೆ ಶಿಬಿರದಿಂದ ಸಾಕು ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಗಣೇಶ, ಕೃಷ್ಣ, ಸುಗ್ರೀವಾ ಹಾಗೂ ಧನಂಜಯ ಆನೆಗಳನ್ನು ಲಾರಿ ಮೂಲಕ ಯಸಳೂರಿಗೆ ಕರೆತರಲಾಯಿತು. ಮಧ್ಯಾಹ್ನದ ಬಳಿಕ ಕೂಬಿಂಗ್ ಆರಂಭಿಸಲಾಯಿತು.