ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ರೂಪಿಸಿದ್ದ ಸಮವಸರಣ
ಯಾಗ ಮಂಟಪದಲ್ಲಿ ಲೋಕಕಲ್ಯಾಣಾರ್ಥ ಶಾಂತಿ ಹೋಮ ನಡೆಯಿತು
ಸಮವಸರಣ ಆಕರ್ಷಣೆ
ಸಮವಸರಣ ಎಂಬುದು ಜೈನರ ಪವಿತ್ರ ಕಲೆಯಾಗಿದೆ. ಜೈನರಗುತ್ತಿ ಪಂಚಕಲ್ಯಾಣಿಕದಲ್ಲಿ ನಿರ್ಮಿಸಿದ್ದ ಸಮವಸರಣ ಆಕರ್ಷಣೆ ಜೊತೆಗೆ ಭಕ್ತಿ ಲೋಕಕ್ಕೆ ಕೊಂಡೊಯ್ಯಿತು. ‘ಸಮವಸರಣ ಎಂದರೆ ತೀರ್ಥಂಕರ ಪವಿತ್ರ ಉಪದೇಶ ಪರಿಚಯಿಸುವ ಸ್ಥಳ ಎಂದರ್ಥ. ತೀರ್ಥಂಕರರು ಕೇವಲಜ್ಞಾನ ಪಡೆದ ನಂತರ ದೇವತೆಗಳು ಸಮವಸರಣ ನಿರ್ಮಿಸುತ್ತಾರೆ ಎಂಬುದು ಜಿನ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ’ ಎಂದು ಪುರೋಹಿತರಾದ ಪ್ರವೀಣ್ ಪಂಡಿತ್ ಹಾಗೂ ಪವನ್ ಪಂಡಿತ್ ಹೇಳಿದರು.
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಮಂಗಳವಾರ ಕೇವಲಜ್ಞಾನ ಕಲ್ಯಾಣಿಕ ಪ್ರಯುಕ್ತ ನೂತನವಾಗಿ ಪ್ರತಿಷ್ಠಾಪಿಸಿರುವ ಶೀತನಾಥ ತೀರ್ಥಂಕರ ಮೂರ್ತಿಗೆ ಜೀವಕಳೆ ತುಂಬುವ ವಿಧಾನ ನಡೆಯಿತು