<p>ಹಾಸನ: ಜಿಲ್ಲೆಯ ಒಂಬತ್ತು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.</p>.<p>ಹಾಸನದ ನಗರದ ಐವರು, ಚನ್ನರಾಯಪಟ್ಟಣ ತಾಲ್ಲೂಕಿನ ಇಬ್ಬರು, ಅರಸೀಕೆರೆಯ ಇಬ್ಬರು ವಿದ್ಯಾರ್ಥಿಗಳು<br />ಈ ಸಾಧನೆ ಮಾಡಿದ್ದಾರೆ.</p>.<p>ನಗರದ ವಿಜಯ ಇಂಗ್ಲಿಷ್ ಶಾಲೆಯ ಬಿ.ಎಸ್.ಗ್ರೀಷ್ಮಾ, ಎಚ್.ಆರ್.ಉತ್ಸವ್, ದಿಶಾ ಎಸ್.ಜೈನ್,<br />ಎಸ್.ಟಿ.ಮೀನಾ, ಯುನೈಟೆಡ್ ಪ್ರೌಢಶಾಲೆಯ ಕೆ.ಜೆ.ಈಶಾನ್ಯ, ಚನ್ನರಾಯಪಟ್ಟಣ ತಾಲ್ಲೂಕು ಕಬ್ಬಳಿ<br />ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಡಿ.ಜೆ.ದೀಪಾ, ಎನ್.ಕೆ.ದೀಕ್ಷಿತಾ ಹಾಗೂ ಅರಸೀಕೆರೆ<br />ಆದಿಚುಂಚನಗಿರಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಚ್.ಆರ್.ಸುಷ್ಮಿತಾ, ಯು.ಪೂಜಾ ಅವರು 625ಕ್ಕೆ 625<br />ಅಂಕ ಗಳಿಸಿದ್ದಾರೆ.</p>.<p>ಹಾಸನ ನಗರದ ಎಸ್ಆರ್ಎಸ್ ಪ್ರಜ್ಞಾ ಶಾಲೆಯ ವಿದ್ಯಾರ್ಥಿ ರೋಹನ್ ಪಿ ಅವರು 625ಕ್ಕೆ 623 ಅಂಕ<br />ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳುಡಿಸ್ಟಿಂಕ್ಷನ್ಹಾಗೂ<br />ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p>ಕೋವಿಡ್ ಆತಂಕದ ನಡುವೆಯೂ ಜುಲೈ 19 ಮತ್ತು 22 ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು.<br />2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ 9ನೇ ಸ್ಥಾನದಲ್ಲಿತ್ತು. ಜಿಲ್ಲೆಗೆ ‘ಎ’<br />ಗ್ರೇಡ್ ಲಭಿಸಿದೆ.</p>.<p>‘ಜಿಲ್ಲೆಯಲ್ಲಿ ಈ ವರ್ಷ ಒಟ್ಟು 20,156 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 67 ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಉಳಿದಂತೆ ಪರೀಕ್ಷೆಗೆ ಹಾಜರಾಗಿದ್ದ 20,089 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಸನ ಜಿಲ್ಲೆ ಶೇ 99.66 ರಷ್ಟುಫಲಿತಾಂಶ ಪಡೆದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಜಿಲ್ಲೆಯ ಒಂಬತ್ತು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.</p>.<p>ಹಾಸನದ ನಗರದ ಐವರು, ಚನ್ನರಾಯಪಟ್ಟಣ ತಾಲ್ಲೂಕಿನ ಇಬ್ಬರು, ಅರಸೀಕೆರೆಯ ಇಬ್ಬರು ವಿದ್ಯಾರ್ಥಿಗಳು<br />ಈ ಸಾಧನೆ ಮಾಡಿದ್ದಾರೆ.</p>.<p>ನಗರದ ವಿಜಯ ಇಂಗ್ಲಿಷ್ ಶಾಲೆಯ ಬಿ.ಎಸ್.ಗ್ರೀಷ್ಮಾ, ಎಚ್.ಆರ್.ಉತ್ಸವ್, ದಿಶಾ ಎಸ್.ಜೈನ್,<br />ಎಸ್.ಟಿ.ಮೀನಾ, ಯುನೈಟೆಡ್ ಪ್ರೌಢಶಾಲೆಯ ಕೆ.ಜೆ.ಈಶಾನ್ಯ, ಚನ್ನರಾಯಪಟ್ಟಣ ತಾಲ್ಲೂಕು ಕಬ್ಬಳಿ<br />ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಡಿ.ಜೆ.ದೀಪಾ, ಎನ್.ಕೆ.ದೀಕ್ಷಿತಾ ಹಾಗೂ ಅರಸೀಕೆರೆ<br />ಆದಿಚುಂಚನಗಿರಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಚ್.ಆರ್.ಸುಷ್ಮಿತಾ, ಯು.ಪೂಜಾ ಅವರು 625ಕ್ಕೆ 625<br />ಅಂಕ ಗಳಿಸಿದ್ದಾರೆ.</p>.<p>ಹಾಸನ ನಗರದ ಎಸ್ಆರ್ಎಸ್ ಪ್ರಜ್ಞಾ ಶಾಲೆಯ ವಿದ್ಯಾರ್ಥಿ ರೋಹನ್ ಪಿ ಅವರು 625ಕ್ಕೆ 623 ಅಂಕ<br />ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳುಡಿಸ್ಟಿಂಕ್ಷನ್ಹಾಗೂ<br />ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.</p>.<p>ಕೋವಿಡ್ ಆತಂಕದ ನಡುವೆಯೂ ಜುಲೈ 19 ಮತ್ತು 22 ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು.<br />2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ 9ನೇ ಸ್ಥಾನದಲ್ಲಿತ್ತು. ಜಿಲ್ಲೆಗೆ ‘ಎ’<br />ಗ್ರೇಡ್ ಲಭಿಸಿದೆ.</p>.<p>‘ಜಿಲ್ಲೆಯಲ್ಲಿ ಈ ವರ್ಷ ಒಟ್ಟು 20,156 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 67 ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಉಳಿದಂತೆ ಪರೀಕ್ಷೆಗೆ ಹಾಜರಾಗಿದ್ದ 20,089 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಸನ ಜಿಲ್ಲೆ ಶೇ 99.66 ರಷ್ಟುಫಲಿತಾಂಶ ಪಡೆದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>