ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ಏಳು ಜನ ಜೂಜುಕೋರರ ಬಂಧನ 

Last Updated 10 ಜನವರಿ 2022, 12:25 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿಯ ಉ.ಬೇವಿನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನ ಎದುರು ಇಸ್ಪೀಟ್ ಆಡುತ್ತಿದ್ದ ಏಳು ಜನರನ್ನು ಅರಸೀಕೆರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಉ.ಬೇವಿನಹಳ್ಳಿ ಗ್ರಾಮದ ಎಸ್. ಭರತ್ (22), ಎನ್.ಕೆಂಚನಗೌಡ (50), ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಡಿ.ಎನ್ ಪರಶುರಾಮ (32), ಎಂ. ನಾಗರಾಜ (25), ಎಚ್. ಹನುಮಂತಪ್ಪ (29) ಹರಿಹರ ತಾಲ್ಲೂಕಿನ ಆದಾಪುರ ಗ್ರಾಮದ ಡಿ. ವೀರಭದ್ರಪ್ಪ (40), ಕೆ.ಪಿ ಶಿವರಾಮ (35) ಬಂಧಿತರು. ಬಂಧಿತರಿಂದ ₹1,03,210 ನಗದು, ಎರಡು ಬೈಕ್, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರಸೀಕೆರೆ ಸಬ್ ಇನ್‌ಸ್ಪೆಕ್ಟರ್‌ ಕೆ.ನಾಗರತ್ನ, ಎಎಸ್ಐ ಸುಬ್ಬಣ್ಣ, ಕಾನ್‌ಸ್ಟೆಬಲ್‌ಗಳಾದ ಚಿದಾನಂದಪ್ಪ, ಎಚ್.ಎಂ ನಟರಾಜ್, ರವೀಂದ್ರ, ಗುರುಪ್ರಸಾದ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT