ಗ್ರಾಮದ ಪುಟ್ಟಸ್ವಾಮಿ ಮತ್ತು ರಾಧ ದಂಪತಿ ತಮ್ಮ ಮಗುವಿನ ಜೊತೆ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಲಗಿದ್ದ ರಾಧ ಅವರ ಕಾಲಿಗೆ ಬೆಂಕಿ ತಗುಲಿದಾಗ ಎಚ್ಚೆತ್ತು ಗುಡಿಸಿಲಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಕೂಡಲೆ ತಮ್ಮ ಪತಿ ಮತ್ತು ಮಗುವನ್ನು ಹೊರಗೆ ಕರೆತಂದಿದ್ದಾರೆ. ಗ್ರಾಮಸ್ಥರನ್ನು ಕರೆತಂದು ಬೆಂಕಿ ನಂದಿಸುವ ವೇಳೆಗೆ ಗುಡಿಸಿಲಿನಲ್ಲಿದ್ದ ಆಹಾರ ಪದಾರ್ಥ, ಪಾತ್ರೆ, ಬಟ್ಟೆ, ₹5ಸಾವಿರ ನಗದು ಸೇರಿದಂತೆ ಎಲ್ಲ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.