ಅರಕಲಗೂಡು: ಆಕಸ್ಮಿಕ ಬೆಂಕಿಗೆ ವಾಸದ ಮನೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ಪುಟ್ಟಮ್ಮ ಲೇಟ್ ಪುಟ್ಟೇಗೌಡರಿಗೆ ಸೇರಿದ ಮನೆ. ಮನೆಯಲ್ಲಿ ಐವರು ವಾಸವಿದ್ದು ಬೀಗ ಹಾಕಿ ಜಮೀನು ಬಳಿ ತೆರಳಿದ್ದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮನೆಯೊಳಗಿದ್ದ ದವಸ, ಧಾನ್ಯ ಎಲ್ಲ ವಸ್ತುಗಳು ಸುಟ್ಟು ಹಾಳಾಗಿವೆ. ಸ್ಥಳೀಯರು ಮತ್ತು ಹೊಳೆನರಸೀಪುರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದರು, ಅಷ್ಟರಲ್ಲೇ ಎಲ್ಲವೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೂದಿಯಾಗಿದ್ದು ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು.