<p><strong>ಹೊಳೆನರಸೀಪುರ</strong>: ಪಟ್ಟಣದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಬುಧವಾರ ಚಿನ್ನ– ಬೆಳ್ಳಿ ವರ್ತಕರು ಭರ್ಜರಿ ವ್ಯಾಪಾರ ನಡೆಸಿದರು. ಆಭರಣ ಚಿನ್ನವೂ ಸಿದ್ಧಗೊಂಡು ಗ್ರಾಹಕರ ಕೈಸೇರುವ ಸಮಯದಲ್ಲಿ ₹1 ಲಕ್ಷ ಗಡಿ ದಾಟುತ್ತಿದ್ದರೂ ಚಿನ್ನ ಖರೀದಿಯಲ್ಲಿ ಜನರ ಉತ್ಸಾಹ ಕಂಡು ಬಂತು.</p>.<p>ಭಾರತೀಯ ಸಂಸ್ಕೃತಿಯಲ್ಲಿ ಅಕ್ಷಯ ತೃತೀಯ ಅಥವಾ ಬಸವ ಜಯಂತಿಯಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಇದ್ದು, ವಿವಿಧ ವಿನ್ಯಾಸದ ಒಡವೆಗಳನ್ನು ಮುಂಗಡವಾಗಿ ಹಣ ನೀಡಿ ಗೃಹಣಿಯರು ಸಿದ್ದಪಡಿಸಲು ಸೂಚಿಸಿ, ಅಕ್ಷಯ ತೃತೀಯದಂದು ಪಡೆಯುತ್ತಾರೆ.</p>.<p>ತಾಲ್ಲೂಕು ಕೇಂದ್ರಗಳಲ್ಲಿ ಅಕ್ಷಯ ತೃತೀಯದಂದು ಯಾವುದೇ ಪ್ರಚಾರವಿಲ್ಲದೇ ಇದ್ದರೂ ಜನರು ಆಭರಣ ಅಂಗಡಿಗಳಿಗೆ ಭೇಟಿ ನೀಡಿ, ಖರೀದಿಯಲ್ಲಿ ತೊಡಗಿದ್ದರು.</p>.<p>ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಪ್ರಯುಕ್ತ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಸರ್ವೆ ಜನ ಸುಖಿನೋ ಭವಂತು ಸಂಕಲ್ಪದೊಂದಿಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ, ಅಲಂಕಾರ ನೆರವೇರಿಸಿ, ಸಹಸ್ರ ನಾಮರ್ಚನೆ, ಮಹಾ ಮಂಗಳಾರುತಿ ಮಾಡಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ</strong>: ಪಟ್ಟಣದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಬುಧವಾರ ಚಿನ್ನ– ಬೆಳ್ಳಿ ವರ್ತಕರು ಭರ್ಜರಿ ವ್ಯಾಪಾರ ನಡೆಸಿದರು. ಆಭರಣ ಚಿನ್ನವೂ ಸಿದ್ಧಗೊಂಡು ಗ್ರಾಹಕರ ಕೈಸೇರುವ ಸಮಯದಲ್ಲಿ ₹1 ಲಕ್ಷ ಗಡಿ ದಾಟುತ್ತಿದ್ದರೂ ಚಿನ್ನ ಖರೀದಿಯಲ್ಲಿ ಜನರ ಉತ್ಸಾಹ ಕಂಡು ಬಂತು.</p>.<p>ಭಾರತೀಯ ಸಂಸ್ಕೃತಿಯಲ್ಲಿ ಅಕ್ಷಯ ತೃತೀಯ ಅಥವಾ ಬಸವ ಜಯಂತಿಯಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಇದ್ದು, ವಿವಿಧ ವಿನ್ಯಾಸದ ಒಡವೆಗಳನ್ನು ಮುಂಗಡವಾಗಿ ಹಣ ನೀಡಿ ಗೃಹಣಿಯರು ಸಿದ್ದಪಡಿಸಲು ಸೂಚಿಸಿ, ಅಕ್ಷಯ ತೃತೀಯದಂದು ಪಡೆಯುತ್ತಾರೆ.</p>.<p>ತಾಲ್ಲೂಕು ಕೇಂದ್ರಗಳಲ್ಲಿ ಅಕ್ಷಯ ತೃತೀಯದಂದು ಯಾವುದೇ ಪ್ರಚಾರವಿಲ್ಲದೇ ಇದ್ದರೂ ಜನರು ಆಭರಣ ಅಂಗಡಿಗಳಿಗೆ ಭೇಟಿ ನೀಡಿ, ಖರೀದಿಯಲ್ಲಿ ತೊಡಗಿದ್ದರು.</p>.<p>ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಪ್ರಯುಕ್ತ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಸರ್ವೆ ಜನ ಸುಖಿನೋ ಭವಂತು ಸಂಕಲ್ಪದೊಂದಿಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ, ಅಲಂಕಾರ ನೆರವೇರಿಸಿ, ಸಹಸ್ರ ನಾಮರ್ಚನೆ, ಮಹಾ ಮಂಗಳಾರುತಿ ಮಾಡಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>