<p><strong>ಅರಸೀಕೆರೆ:</strong> ತಾಲ್ಲೂಕಿಗೆ ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಹೆಚ್ಚಿಗೆ ತರಲು ವಿದ್ಯುತ್ ಅಭಾವದ ನೆಪ ತೊಡಕಾಗಿತ್ತು ಈಗ ಸೆಸ್ಕ್ ಅಧಿಕಾರಿಗಳಿಂದ ಪತ್ರ ಪಡೆದು ಮಾಹಿತಿ ತಿಳಿಸಲಾಗಿದೆ. ಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.</p>.<p>ನಗರದದಲ್ಲಿ ಭಾನುವಾರ ಗಂಗಾ ಕಲ್ಯಾಣ ಯೋಜನೆಯ 200 ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.</p>.<p>ರೈತರ ಕೃಷಿ ಕಾರ್ಯಗಳಿಗೆ ಪ್ರಮುಖವಾಗಿ ನೀರು ಹಾಗೂ ಕರೆಂಟ್ ಅತ್ಯವಶ್ಯಕವಾಗಿದೆ.ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಒದಗಿಸುವ ಕೆಲಸ ಮಾಡುತ್ತಿದ್ದು ವಿದ್ಯುತ್ಗಾಗಿ ಸೌರ ವಿದ್ಯುತ್ ಘಟಕ ( ಸೋಲಾರ್ ಪ್ಲಾಂಟ್) ಯೋಜನೆ ಅನುಷ್ಠಾನಕ್ಕೆ ಬರಲಿದೆ. ರೈತರಿಗೆ ಪ್ರತಿ ದಿನನಿತ್ಯ ಬೆಳಿಗ್ಗೆ 9 ರಿಂದ 3 ರವರೆಗೆ ನಿರಂತರ ವಿದ್ಯುತ್ ನೀಡಲಾಗುವುದು. ಇಲ್ಲದವರ ಪಾಲಿಗೆ ಗಂಗಾಕಲ್ಯಾಣ ಯೋಜನೆ ವರದಾನವಾಗಿದೆ. ಎಂದರು.</p>.<p>ಗ್ಯಾರಂಟಿ ಯೋಜನೆಗಳಿಂದ ಬಡವರ ಹಾಗೂ ಮಧ್ಯಮ ವರ್ಗದವರ ಜೀವನವು ಸುಗಮವಾಗಿ ಸಾಗುತ್ತಿದೆ. ₹ 1.10 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ನೀಡಿದ್ದು ಜನರ ಆರ್ಥಿಕ ವೆಚ್ಚ ಕಡಿಮೆಯಾಗಿ ಆದಾಯ ಹೆಚ್ಚಿದೆ ಎಂದರು. ಆದರೂ ವಿರೋಧ ಪಕ್ಷದವರು ಬೆಳಗಾವಿ ಅಧಿವೇಶನದಲ್ಲಿ ಅನಗತ್ಯ ಚರ್ಚೆ ನಡೆಸಿ ಸಮಯವ್ಯಯ ಮಾಡಿದರು ಎಂದು ಟೀಕಿಸಿದರು.</p>.<p>ಗಿಮಿಕ್ ರಾಜಕಾರಣಕ್ಕೆ ಜನ ಮರುಳಾಗಬಾರದು, ಜನರ ಸೇವೆ ಮಾಡುವ ವ್ಯಕ್ತಿಗಳಿಗೆ ಗೆಲುವು ನೀಡಬೇಕು. ಸತತ 4 ಬಾರಿ ಗೆಲುವು ನೀಡಿ ಜನರ ಋಣ ತೀರಿಸುವುದೇ ನನ್ನ ಧ್ಯೇಯ ಎಂದರು.</p>.<p>ಜನರ ಸಮಸ್ಯೆಗಳಿಗೆ ಪಿಡಿಒಗಳ ಸ್ಪಂದನೆ ಬಗ್ಗೆ ಪ್ರತಿ ಜನಸಂಪರ್ಕ ಸಭೆಯಲ್ಲಿ ಚರ್ಚಿಸಲಾಗುವುದು . ಪಂಚಾಯಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಮುಖಂಡರುಗಳು ಖುದ್ದು ಹಾಜರಿದ್ದು ಜನಗಳ ಸಮಸ್ಯೆಗಳನ್ನು ಪರಿಹರಿಸಲು ಗಮನವಹಿಸಬೇಕು ಎಂದರು.</p>.<p>ವಿದ್ಯುತ್ ಇಲಾಖಾ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದ ಕಾರಣ ಪ್ರಶ್ನೆ ಹಾಕಿದ ಶಾಸಕರು ಕೆಲವೇ ದಿನಗಳಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ಸಭೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡುವುದು, ಬೋರೆವೆಲ್ ವಿದ್ಯುತ್ ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.</p>.<p>ಮುಖಂಡರಾದ ಬಿಳಿ ಚೌಡಯ್ಯ , ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ , ಮುಖಂಡರಾದ ಚಿಕ್ಕಯರಗನಾಳು ಮಲ್ಲೇಶ್ , ಗುತ್ತಿನಕೆರೆ ಶಿವಮೂರ್ತಿ , ಹರತನಹಳ್ಳಿ ಜಯಣ್ಣ , ಮಂಜುಳಾ ಬಾಯಿ , ಸುಲೋಚನಾ ಬಾಯಿ , ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ:</strong> ತಾಲ್ಲೂಕಿಗೆ ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಹೆಚ್ಚಿಗೆ ತರಲು ವಿದ್ಯುತ್ ಅಭಾವದ ನೆಪ ತೊಡಕಾಗಿತ್ತು ಈಗ ಸೆಸ್ಕ್ ಅಧಿಕಾರಿಗಳಿಂದ ಪತ್ರ ಪಡೆದು ಮಾಹಿತಿ ತಿಳಿಸಲಾಗಿದೆ. ಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.</p>.<p>ನಗರದದಲ್ಲಿ ಭಾನುವಾರ ಗಂಗಾ ಕಲ್ಯಾಣ ಯೋಜನೆಯ 200 ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.</p>.<p>ರೈತರ ಕೃಷಿ ಕಾರ್ಯಗಳಿಗೆ ಪ್ರಮುಖವಾಗಿ ನೀರು ಹಾಗೂ ಕರೆಂಟ್ ಅತ್ಯವಶ್ಯಕವಾಗಿದೆ.ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಒದಗಿಸುವ ಕೆಲಸ ಮಾಡುತ್ತಿದ್ದು ವಿದ್ಯುತ್ಗಾಗಿ ಸೌರ ವಿದ್ಯುತ್ ಘಟಕ ( ಸೋಲಾರ್ ಪ್ಲಾಂಟ್) ಯೋಜನೆ ಅನುಷ್ಠಾನಕ್ಕೆ ಬರಲಿದೆ. ರೈತರಿಗೆ ಪ್ರತಿ ದಿನನಿತ್ಯ ಬೆಳಿಗ್ಗೆ 9 ರಿಂದ 3 ರವರೆಗೆ ನಿರಂತರ ವಿದ್ಯುತ್ ನೀಡಲಾಗುವುದು. ಇಲ್ಲದವರ ಪಾಲಿಗೆ ಗಂಗಾಕಲ್ಯಾಣ ಯೋಜನೆ ವರದಾನವಾಗಿದೆ. ಎಂದರು.</p>.<p>ಗ್ಯಾರಂಟಿ ಯೋಜನೆಗಳಿಂದ ಬಡವರ ಹಾಗೂ ಮಧ್ಯಮ ವರ್ಗದವರ ಜೀವನವು ಸುಗಮವಾಗಿ ಸಾಗುತ್ತಿದೆ. ₹ 1.10 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ನೀಡಿದ್ದು ಜನರ ಆರ್ಥಿಕ ವೆಚ್ಚ ಕಡಿಮೆಯಾಗಿ ಆದಾಯ ಹೆಚ್ಚಿದೆ ಎಂದರು. ಆದರೂ ವಿರೋಧ ಪಕ್ಷದವರು ಬೆಳಗಾವಿ ಅಧಿವೇಶನದಲ್ಲಿ ಅನಗತ್ಯ ಚರ್ಚೆ ನಡೆಸಿ ಸಮಯವ್ಯಯ ಮಾಡಿದರು ಎಂದು ಟೀಕಿಸಿದರು.</p>.<p>ಗಿಮಿಕ್ ರಾಜಕಾರಣಕ್ಕೆ ಜನ ಮರುಳಾಗಬಾರದು, ಜನರ ಸೇವೆ ಮಾಡುವ ವ್ಯಕ್ತಿಗಳಿಗೆ ಗೆಲುವು ನೀಡಬೇಕು. ಸತತ 4 ಬಾರಿ ಗೆಲುವು ನೀಡಿ ಜನರ ಋಣ ತೀರಿಸುವುದೇ ನನ್ನ ಧ್ಯೇಯ ಎಂದರು.</p>.<p>ಜನರ ಸಮಸ್ಯೆಗಳಿಗೆ ಪಿಡಿಒಗಳ ಸ್ಪಂದನೆ ಬಗ್ಗೆ ಪ್ರತಿ ಜನಸಂಪರ್ಕ ಸಭೆಯಲ್ಲಿ ಚರ್ಚಿಸಲಾಗುವುದು . ಪಂಚಾಯಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಮುಖಂಡರುಗಳು ಖುದ್ದು ಹಾಜರಿದ್ದು ಜನಗಳ ಸಮಸ್ಯೆಗಳನ್ನು ಪರಿಹರಿಸಲು ಗಮನವಹಿಸಬೇಕು ಎಂದರು.</p>.<p>ವಿದ್ಯುತ್ ಇಲಾಖಾ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದ ಕಾರಣ ಪ್ರಶ್ನೆ ಹಾಕಿದ ಶಾಸಕರು ಕೆಲವೇ ದಿನಗಳಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ಸಭೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡುವುದು, ಬೋರೆವೆಲ್ ವಿದ್ಯುತ್ ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.</p>.<p>ಮುಖಂಡರಾದ ಬಿಳಿ ಚೌಡಯ್ಯ , ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ , ಮುಖಂಡರಾದ ಚಿಕ್ಕಯರಗನಾಳು ಮಲ್ಲೇಶ್ , ಗುತ್ತಿನಕೆರೆ ಶಿವಮೂರ್ತಿ , ಹರತನಹಳ್ಳಿ ಜಯಣ್ಣ , ಮಂಜುಳಾ ಬಾಯಿ , ಸುಲೋಚನಾ ಬಾಯಿ , ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>