ಹಾಸನ: ಧಾರ್ಮಿಕ ಅಲ್ಪಸಂಖ್ಯಾತ ಮೇಲೆ ನಡೆದಿರುವ ದಾಳಿಗಳನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿಕಚೇರಿ ಎದುರು ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಸಿಪಿಎಂ ವತಿಯಿಂದ ಪ್ರತಿಭಟನೆನಡೆಸಲಾಯಿತು.
ಸಂಘ ಪರಿವಾರಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳಿಂದ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳವಿರುದ್ಧ ದಾಳಿ ನಡೆಯುತ್ತಿದೆ. ಇದು ದೇಶದ ಸಂವಿಧಾನದ ಮೇಲಿನ ಒಂದು ವ್ಯವಸ್ಥಿತ ದಾಳಿಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲಿನದಾಳಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.
‘ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಬಿಜೆಪಿ ನಾಯಕರು ಕೋಮುವಾದಿ ಸಂದೇಶಗಳನ್ನುಉತ್ತೇಜಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಹಿಂಸಾಚಾರ ಪ್ರಚೋದಿಸಿದ್ದಾರೆ. ಇಂಥವರುಕಾನೂನಿನಿಂದ ವಿನಾಯಿತಿ ಪಡೆಯುತ್ತಾರೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿಸಂತ್ರಸ್ತರನ್ನು ರಕ್ಷಿಸುವ ಬದಲು, ಬೆಂಬಲಿಸುವವರ ವಿರುದ್ಧ ಸುಳ್ಳುಪ್ರಕರಣಗಳ ಮೂಲಕ ಬಂಧಿಸುತ್ತದೆ’ ಎಂದು ಆರೋಪಿಸಿದರು.
ಮಾನಕ ಹಕ್ಕು ಗುಂಪುಗಳ ಇತ್ತೀಚಿನ ವರದಿ ಪ್ರಕಾರ 2021 ರಲ್ಲಿ ಕ್ರಿಶ್ಚಿಯನ್ ಸಮುದಾಯಗಳು ಮತ್ತು ಅವರ ಧಾರ್ಮಿಕ ಆರಾಧನಾ ಸ್ಥಳಗಳ ಮೇಲೆ 300 ದಾಳಿ ದಾಖಲಿಸಲಾಗಿದೆ. ಇವುಗಳಿಗೆ ಗುರಿಯಾದವರು ಹೆಚ್ಚಿನವರು ಆದಿವಾಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು. ಪ್ರಾರ್ಥನಾ ಸಭೆಗಳನ್ನು ನಿಯಮಿತವಾಗಿ ತಡೆಯಲಾಗುತ್ತಿದೆ ಮತ್ತು ಮತಾಂತರ ತಡೆಯುವ ಹೆಸರಿನಲ್ಲಿ ಭಾಗವಹಿಸುವವರನ್ನು ಥಳಿಸಲಾಗುತ್ತಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ದಾಳಿ ಇದಕ್ಕೊಂದು ಉದಾಹರಣೆ ಎಂದು ವಿವರಿಸಿದರು.
ಮುಸ್ಲಿಂ ಅಲ್ಪಸಂಖ್ಯಾತ ಸಮು ದಾಯದವರನ್ನು ಗುರಿಯಾಗಿಸಿ ಕೊಂಡು ದೊಂಬಿ, ಹತ್ಯೆ,ಬಂಧನ ಗಳು ಮತ್ತು ಲವ್ ಜಿಹಾದ್’ ಹೆಸರಿನಲ್ಲಿ ಹಿಂಸಾಚಾರದ ಪ್ರಕರಣ ಗಳು ಮುಂದುವರಿದಿವೆ. ತ್ರಿಪುರಾ ದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮಾಡಲಾಗಿದೆ.ಕೆಲ ಮಸೀದಿಗಳಿಗೂ ಹಾನಿಉಂಟು ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಸ್ಥಳೀಯ ಕಾರ್ಯದರ್ಶಿ ಎಂ.ಜಿ.ಪೃಥ್ವಿ ಹಾಗೂ ಮುಖಂಡ ಅರವಿಂದ್ ಇದ್ದರು.