ಹಾಸನ: ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಅಂತಹವರಿಗೆ ಬ್ಯಾಂಕ್ಗಳು ನೀಡುವ ಕಡಿಮೆ
ಬಡ್ಡಿ ದರದ ಸಾಲ ಸೌಲಭ್ಯ ವರದಾನವಾಗಿದೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ
ವಿನೋದ್ ಚಂದ್ರ ತಿಳಿಸಿದರು.
ನಗರದ ಎನ್.ಆರ್. ಸರ್ಕಲ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗುರುವಾರ ಏರ್ಪಡಿಸಿದ್ದ ಗೃಹ
ಸಾಲ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಸಾಲಗಳ ಮೂಲಕ ಸಮಸ್ಯೆಗಳ ಸುಳಿಗೆ ಸಿಗುವ
ಬದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತಿತರರ ಬ್ಯಾಂಕ್ಗಳಲ್ಲಿ ಸಿಗುವ ಸುಲಭ ಕಂತುಗಳ
ಸಾಲ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.