<p><strong>ಹಿರೀಸಾವೆ: </strong>ತೇನ್ಸಿಂಗ್ ಯುವ ಸಾಹಸಿ ಸಂಘದ ವತಿಯಿಂದ ಶನಿವಾರ ಕೋವಿಡ್–19 ಜಾಗೃತಿ ಮೂಡಿಸಲು ನೇಪಾಳಕ್ಕೆ ಹೊರಟ ಬೈಕ್ ರ್ಯಾಲಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಶಾಸಕರು, ‘ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಕೊರೊನಾ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಂದೋಲನ ಕೈಗೊಂಡಿರುವುದು ಉತ್ತಮ ಕೆಲಸ’ ಎಂದರು.</p>.<p>‘ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೇನ್ಸಿಂಗ್ ಯುವ ಸಾಹಸಿ ಸಂಘವು 25 ಬಾರಿ ದೇಶವ್ಯಾಪಿ ಬೈಕ್ ರ್ಯಾಲಿ ಕೈಗೊಂಡು, ಜನರಲ್ಲಿ ಅರಿವು ಮೂಡಿಸಿದೆ. ಈ ಬಾರಿ ಕೊವಿಡ್-19 ಜಾಗೃತಿ ಮೂಡಿಸಲಾಗುವುದು’ ಎಂದು ಸಂಘದ ಸದಸ್ಯರು ತಿಳಿಸಿದರು.</p>.<p>ಬೈಕ್ ರ್ಯಾಲಿ ತಂಡದಲ್ಲಿಸಂಘದ ಡಾ.ಅಪ್ಪಾಜಿಗೌಡ, ಡಾ.ಅಶೋಕ್, ಪ್ರಗತಿ ಶಂಕರ್, ಡಿಶ್ ರಾಜು, ಯೋಗೇಶ್, ಎಂಜಿನಿಯರ್ ಮಂಜುನಾಥ್ ಹಾಗೂ ರವಿ ಇದ್ದಾರೆ.</p>.<p>ಕಾರ್ಯಕ್ರಮದಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್, ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಬಾಬು, ಫೈನಾನ್ಸ್ ಮಹೇಶ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ: </strong>ತೇನ್ಸಿಂಗ್ ಯುವ ಸಾಹಸಿ ಸಂಘದ ವತಿಯಿಂದ ಶನಿವಾರ ಕೋವಿಡ್–19 ಜಾಗೃತಿ ಮೂಡಿಸಲು ನೇಪಾಳಕ್ಕೆ ಹೊರಟ ಬೈಕ್ ರ್ಯಾಲಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಶಾಸಕರು, ‘ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಕೊರೊನಾ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಂದೋಲನ ಕೈಗೊಂಡಿರುವುದು ಉತ್ತಮ ಕೆಲಸ’ ಎಂದರು.</p>.<p>‘ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೇನ್ಸಿಂಗ್ ಯುವ ಸಾಹಸಿ ಸಂಘವು 25 ಬಾರಿ ದೇಶವ್ಯಾಪಿ ಬೈಕ್ ರ್ಯಾಲಿ ಕೈಗೊಂಡು, ಜನರಲ್ಲಿ ಅರಿವು ಮೂಡಿಸಿದೆ. ಈ ಬಾರಿ ಕೊವಿಡ್-19 ಜಾಗೃತಿ ಮೂಡಿಸಲಾಗುವುದು’ ಎಂದು ಸಂಘದ ಸದಸ್ಯರು ತಿಳಿಸಿದರು.</p>.<p>ಬೈಕ್ ರ್ಯಾಲಿ ತಂಡದಲ್ಲಿಸಂಘದ ಡಾ.ಅಪ್ಪಾಜಿಗೌಡ, ಡಾ.ಅಶೋಕ್, ಪ್ರಗತಿ ಶಂಕರ್, ಡಿಶ್ ರಾಜು, ಯೋಗೇಶ್, ಎಂಜಿನಿಯರ್ ಮಂಜುನಾಥ್ ಹಾಗೂ ರವಿ ಇದ್ದಾರೆ.</p>.<p>ಕಾರ್ಯಕ್ರಮದಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್, ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಬಾಬು, ಫೈನಾನ್ಸ್ ಮಹೇಶ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>