<p><strong>ಆಲೂರು: </strong>ಕೆಂಚಮ್ಮನ ಹೊಸಕೋಟೆ ಹೋಬಳಿ ಮಠದ ಕೊಪ್ಪಲು ಗ್ರಾಮದ ಬಳಿ ಕಾಡಾನೆಯೊಂದು ರಸ್ತೆ ದಾಟುವ ಸಂದರ್ಭದಲ್ಲಿ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಶನಿವಾರ ಸಂಜೆ ನಡೆದಿದೆ.</p>.<p>ರಸ್ತೆಯಲ್ಲಿ ನಡೆದು ಬರುತ್ತಿದ್ದ ಜನರು ಒಂಟಿ ಸಲಗ ಕಾಫಿ ತೋಟದಿಂದ ಬರುವುದನ್ನು ಗಮನಿಸಿ ವಿಡಿಯೊ ಮಾಡುತ್ತಿದ್ದರು. ಏನೂ ಅರಿಯದ ವ್ಯಕ್ತಿ ಎದುರಿನಿಂದ ಬೈಕಿನಲ್ಲಿ ಬರುವುದನ್ನು ಕಂಡು ಕೂಗಾಡಿದರು.</p>.<p>ಆನೆ ತೋಟದಿಂದ ದಾಟಿ ರಸ್ತೆಗೆ ದಾಪುಗಾಲು ಇಡುವ ವೇಳೆಗೆ ಆನೆ ಮುಂದೆಯೇ ಬೈಕ್ ಹಾದು ಹೋದರೂ, ಆನೆ ಸುಮ್ಮನೆ ರಸ್ತೆ ದಾಟಿತು. ಬೈಕ್ ಸವಾರ ಹಾರೋಹಳ್ಳಿ ಸಂತೋಷ್ ಪ್ರಾಣಾಪಾಯದಿಂದ ಪಾರಾದನು. ಆನೆ ಸೊಂಡಿಲು ಚಾಚಿದ್ದರೂ ಯುವಕ ಬಲಿಯಾಗುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>‘ಭೀಮ ಎಂದೆ ಹೆಸರಿಸಲ್ಪಡುವ ಒಂಟಿ ಸಲಗ ಆನೆಯು ಈವರೆಗೂ ಗ್ರಾಮದೊಳಗೆ ಪ್ರವೇಶಿಸಿದರೂ ಯಾರಿಗೂ ಅಪಾಯ ತಂದೊಡ್ಡಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು: </strong>ಕೆಂಚಮ್ಮನ ಹೊಸಕೋಟೆ ಹೋಬಳಿ ಮಠದ ಕೊಪ್ಪಲು ಗ್ರಾಮದ ಬಳಿ ಕಾಡಾನೆಯೊಂದು ರಸ್ತೆ ದಾಟುವ ಸಂದರ್ಭದಲ್ಲಿ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಶನಿವಾರ ಸಂಜೆ ನಡೆದಿದೆ.</p>.<p>ರಸ್ತೆಯಲ್ಲಿ ನಡೆದು ಬರುತ್ತಿದ್ದ ಜನರು ಒಂಟಿ ಸಲಗ ಕಾಫಿ ತೋಟದಿಂದ ಬರುವುದನ್ನು ಗಮನಿಸಿ ವಿಡಿಯೊ ಮಾಡುತ್ತಿದ್ದರು. ಏನೂ ಅರಿಯದ ವ್ಯಕ್ತಿ ಎದುರಿನಿಂದ ಬೈಕಿನಲ್ಲಿ ಬರುವುದನ್ನು ಕಂಡು ಕೂಗಾಡಿದರು.</p>.<p>ಆನೆ ತೋಟದಿಂದ ದಾಟಿ ರಸ್ತೆಗೆ ದಾಪುಗಾಲು ಇಡುವ ವೇಳೆಗೆ ಆನೆ ಮುಂದೆಯೇ ಬೈಕ್ ಹಾದು ಹೋದರೂ, ಆನೆ ಸುಮ್ಮನೆ ರಸ್ತೆ ದಾಟಿತು. ಬೈಕ್ ಸವಾರ ಹಾರೋಹಳ್ಳಿ ಸಂತೋಷ್ ಪ್ರಾಣಾಪಾಯದಿಂದ ಪಾರಾದನು. ಆನೆ ಸೊಂಡಿಲು ಚಾಚಿದ್ದರೂ ಯುವಕ ಬಲಿಯಾಗುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>‘ಭೀಮ ಎಂದೆ ಹೆಸರಿಸಲ್ಪಡುವ ಒಂಟಿ ಸಲಗ ಆನೆಯು ಈವರೆಗೂ ಗ್ರಾಮದೊಳಗೆ ಪ್ರವೇಶಿಸಿದರೂ ಯಾರಿಗೂ ಅಪಾಯ ತಂದೊಡ್ಡಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>