ಹಾಸನ: ತಾಲ್ಲೂಕಿನ ಶಂಖ ಗ್ರಾಮದಲ್ಲಿ ಗುರುವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದ ಚಿರತೆಯನ್ನು ‘ಜೋಡಿ ನಳಿಕೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ’ ಎಂಬುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.
ಗ್ರಾಮದ ಸ್ವಾಮಿಗೌಡ ಅವರ ಜಮೀನಿನಲ್ಲಿ ಎರಡು ವರ್ಷದ ಚಿರತೆಯ ಕಳೇಬರಹ ಪತ್ತೆಯಾಗಿತ್ತು. ಕುತ್ತಿಗೆ, ಕಣ್ಣಿನ ಬಳಿ ಸಣ್ಣ ಪುಟ್ಟ ಗಾಯದ ಗುರುತು ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದರಿಂದ ಸಾವಿನ ಬಗ್ಗೆ ಸಂಶಯ ಮೂಡಿತ್ತು.