<p><strong>ಅರಕಲಗೂಡು</strong>: ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಬೀಳುತ್ತಿರುವುದರಿಂದ ಭತ್ತದ ಕಟಾವು ಮಾಡುತ್ತಿರುವ ರೈತರನ್ನು ಆತಂಕಕ್ಕೆ ದೂಡಿದೆ.</p>.<p>ತಾಲ್ಲೂಕಿನ ಹಾರಂಗಿ, ಹೇಮಾವತಿ ಹಾಗೂ ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಟಾವು ಕಾರ್ಯ ಚುರುಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ ಹಾಗೂ ಆಗಾಗ ಬೀಳುವ ತುಂತುರು ಮಳೆ ಭತ್ತದ ಕಟಾವಿಗೆ ಅಡ್ಡಿಯಾಗಿದೆ.</p>.<p>ಕೆಲವು ಕಡೆ ರೈತರು ಭತ್ತದ ಕಟಾವು ಅರೆಬರೆ ಮಾಡಿದ್ದು, ಬಿಸಿಲು ಬೀಳದ್ದರಿಂದ ಗದ್ದೆಗಳಲ್ಲಿ ಹುಲ್ಲು ಒಣಗಿಲ್ಲ, ಗುಡ್ಡೆ ಹಾಕಲು ಆಗುತ್ತಿಲ್ಲ. ಆದರೂ, ಮಳೆ ಬರುವ ಭೀತಿ ನಡುವೆಯೇ ಹಲವೆಡೆ ರೈತರು ತರಾತುರಿಯಲ್ಲಿ ಬಣವೆ ಹಾಕುತ್ತಿದ್ದಾರೆ.</p>.<p>‘ಮೊದಲೇ ಕೂಲಿ ಕಾರ್ಮಿಕರ ಕೊರತೆ ಇದೆ. ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತದ ಫಸಲು ಗದ್ದೆಗಳಲ್ಲಿ ಹಾಳಾಗುತ್ತಿದೆ’ ಎಂದು ರೈತರು ತಮ್ಮ ನೋವು ಹೇಳಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು</strong>: ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಬೀಳುತ್ತಿರುವುದರಿಂದ ಭತ್ತದ ಕಟಾವು ಮಾಡುತ್ತಿರುವ ರೈತರನ್ನು ಆತಂಕಕ್ಕೆ ದೂಡಿದೆ.</p>.<p>ತಾಲ್ಲೂಕಿನ ಹಾರಂಗಿ, ಹೇಮಾವತಿ ಹಾಗೂ ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಟಾವು ಕಾರ್ಯ ಚುರುಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ ಹಾಗೂ ಆಗಾಗ ಬೀಳುವ ತುಂತುರು ಮಳೆ ಭತ್ತದ ಕಟಾವಿಗೆ ಅಡ್ಡಿಯಾಗಿದೆ.</p>.<p>ಕೆಲವು ಕಡೆ ರೈತರು ಭತ್ತದ ಕಟಾವು ಅರೆಬರೆ ಮಾಡಿದ್ದು, ಬಿಸಿಲು ಬೀಳದ್ದರಿಂದ ಗದ್ದೆಗಳಲ್ಲಿ ಹುಲ್ಲು ಒಣಗಿಲ್ಲ, ಗುಡ್ಡೆ ಹಾಕಲು ಆಗುತ್ತಿಲ್ಲ. ಆದರೂ, ಮಳೆ ಬರುವ ಭೀತಿ ನಡುವೆಯೇ ಹಲವೆಡೆ ರೈತರು ತರಾತುರಿಯಲ್ಲಿ ಬಣವೆ ಹಾಕುತ್ತಿದ್ದಾರೆ.</p>.<p>‘ಮೊದಲೇ ಕೂಲಿ ಕಾರ್ಮಿಕರ ಕೊರತೆ ಇದೆ. ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತದ ಫಸಲು ಗದ್ದೆಗಳಲ್ಲಿ ಹಾಳಾಗುತ್ತಿದೆ’ ಎಂದು ರೈತರು ತಮ್ಮ ನೋವು ಹೇಳಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>