ರಾಜ್ಸಿಂಗ್ ಅವರಿಗೆ ಚಾಕು ತೋರಿಸಿ, ಹೇಳಿದ ಕಡೆ ಲಾರಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. 15 ರಿಂದ 20 ಕಿ.ಮೀ. ದೂರ ಬಂದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾರಿಯನ್ನು ನಿಲ್ಲಿಸಿ, ರಾಜ್ಸಿಂಗ್ ಬಳಿ ಇದ್ದ ₹ 40ಸಾವಿರ ಕಿತ್ತುಕೊಂಡಿದ್ದಾರೆ. ರಾಜ್ಸಿಂಗ್ ಮತ್ತು ಲಾರಿ ಕ್ಲೀನರ್ ಅಜಯ್ ಸಿಂಗ್ ಅವರನ್ನು ಕಾರಿನಲ್ಲಿ ಕೂರಿಸಿದ್ದಾರೆ.