ಹೊಸದಾಗಿ ಅರಸೀಕೆರೆ ತಾಲ್ಲೂಕಿನ 11, ಚನ್ನರಾಯಪಟ್ಟಣ 50, ಆಲೂರು 8, ಹಾಸನ 129, ಹೊಳೆನರಸೀಪುರ 32, ಅರಕಲಗೂಡು 43, ಬೇಲೂರು 19, ಸಕಲೇಶಪುರ 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶೀತ ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಾಸನ ಮತ್ತು ಚನ್ನರಾಯಪಟ್ಟಣದ ತಲಾ ಇಬ್ಬರು ಚಿಕಿತ್ಸೆಗೆ ಸಂದಿಸಲಿಲ್ಲ. ನಿಯಮ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.