<p><strong>ಹಾಸನ: </strong>ಜಿಲ್ಲೆಯ ಆಲೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು. <br /><br />ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರು 7 ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿಮ್ಮ ದುಃಖ, ನೋವು, ದುಮ್ಮಾನವನ್ನು ನೋಡಿದೆ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ನಾವು ನಿಮ್ಮ ಬೆಂಬಲವಾಗಿ ನಿಂತು 7 ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಲಿದೆ ಎಂದು ಹೇಳಿದರು. <br /><br />ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬೆಳೆಗಾರರಿಗೆ 25 ವರ್ಷ ಆ ಭೂಮಿಯನ್ನು ಲೀಸ್ಗೆ ಕೊಡಲು ಕಾನೂನು ರೂಪಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅರಣ್ಯದಲ್ಲಿ ಇರುವ ಯಾರೊಬ್ಬರನ್ನೂ ಒಕ್ಕಲೆಬ್ಬಿಸದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಬದ್ಧವಾಗಿದೆ ಎಂದರು. <br /><br />ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿಯರ ಖಾತೆಗೆ ₹2000 ಖಚಿತ, ಅನ್ನಭಾಗ್ಯದಡಿ 10 ಕೆ.ಜಿ. ಅಕ್ಕಿ ಉಚಿತ ಎಂದು ತಿಳಿಸಿದರು. <br /><br />ಕಾಂಗ್ರೆಸ್ ಪಕ್ಷದ ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಅಕ್ಷರದಾಸೋಹ ಯೋಜನೆಗಳು ಈಗಲೂ ಜಾರಿಯಲ್ಲಿವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಜನರು ಮಾಡಬೇಕು ಎಂದರು.<br /><br />ಈ ಭಾಗದ ಕಾಡಾನೆ ಸಮಸ್ಯೆ, ಹೇಮಾವತಿ ಸಂತ್ರಸ್ತರ ಬವಣೆಗಳು ಪಕ್ಷಕ್ಕೆ ತಿಳಿದಿವೆ. ಅದೆಲ್ಲವನ್ನೂ ಪರಿಹರಿಸಲು ಪಕ್ಷ ಬದ್ಧವಾಗಿದೆ ಎಂದರು. <br /><br />ಇದಕ್ಕೂ ಮೊದಲು ಬಸ್ನಲ್ಲಿ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಮೋಟಮ್ಮ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು.</p>.<p><strong>ಇವನ್ನೂ ಓದಿ... </strong></p>.<p>* <a href="https://www.prajavani.net/district/mysuru/congress-mla-tanveer-sait-announced-political-retirement-for-karnataka-assembly-election-2023-1019382.html" target="_blank">ಚುನಾವಣಾ ರಾಜಕೀಯದಿಂದ ನಿವೃತ್ತಿ: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಘೋಷಣೆ</a></p>.<p>* <a href="https://www.prajavani.net/karnataka-news/karnataka-assembly-election-2023-nagamangala-jds-mla-suresh-gowda-bjp-politics-1019389.html" target="_blank">ಜಾತ್ರೆಯಲ್ಲಿ ಅಶ್ಲೀಲ ನೃತ್ಯ: ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಬಿಜೆಪಿ ಕಿಡಿ</a></p>.<p>* <a href="https://www.prajavani.net/karnataka-news/karnataka-assembly-election-2023-narendra-modi-basavaraj-bommai-bjp-congress-politics-1019380.html" target="_blank">ಚುನಾವಣೆಯಿಂದಾಗಿ ಮೋದಿಗೆ ಕರ್ನಾಟಕ, ಬಿಎಸ್ವೈ ನೆನಪಾಗಿದೆ: ಕಾಂಗ್ರೆಸ್ ವ್ಯಂಗ್ಯ</a></p>.<p>*<a href="https://www.prajavani.net/district/hasana/karnataka-assembly-election-2023-hassan-constituency-hd-kumaraswamy-hd-revanna-cm-ibrahim-jds-1019388.html" target="_blank"> ಹಾಸನ ಕ್ಷೇತ್ರದ ಟಿಕೆಟ್ ವಿಚಾರ: ಯಾವ ಸಭೆಯನ್ನೂ ಕರೆದಿಲ್ಲ ಎಂದ ಸಿ.ಎಂ. ಇಬ್ರಾಹಿಂ</a></p>.<p>* <a href="https://www.prajavani.net/district/uttara-kannada/karnataka-assembly-election-2023-siddaramaiah-basavaraj-bommai-congress-bjp-flex-banner-politics-1019398.html" target="_blank">ಶಿರಸಿ: ಸಿ.ಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಬ್ಯಾನರ್</a></p>.<p>* <a href="https://www.prajavani.net/district/uttara-kannada/banavasi-kadambotsava-2023-basavaraj-bommai-shivaram-hebbar-bjp-congress-politics-1019401.html" target="_blank">ಬನಾವಸಿ ಕದಂಬೋತ್ಸವ: ಬಿಜೆಪಿ ಬಾವುಟ, ಕಮಲದ ಚಿಹ್ನೆಯ ಟೀಶರ್ಟ್ಗೆ ಕಾಂಗ್ರೆಸ್ ಆಕ್ಷೇಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಜಿಲ್ಲೆಯ ಆಲೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು. <br /><br />ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರು 7 ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿಮ್ಮ ದುಃಖ, ನೋವು, ದುಮ್ಮಾನವನ್ನು ನೋಡಿದೆ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ನಾವು ನಿಮ್ಮ ಬೆಂಬಲವಾಗಿ ನಿಂತು 7 ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಲಿದೆ ಎಂದು ಹೇಳಿದರು. <br /><br />ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬೆಳೆಗಾರರಿಗೆ 25 ವರ್ಷ ಆ ಭೂಮಿಯನ್ನು ಲೀಸ್ಗೆ ಕೊಡಲು ಕಾನೂನು ರೂಪಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅರಣ್ಯದಲ್ಲಿ ಇರುವ ಯಾರೊಬ್ಬರನ್ನೂ ಒಕ್ಕಲೆಬ್ಬಿಸದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಬದ್ಧವಾಗಿದೆ ಎಂದರು. <br /><br />ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿಯರ ಖಾತೆಗೆ ₹2000 ಖಚಿತ, ಅನ್ನಭಾಗ್ಯದಡಿ 10 ಕೆ.ಜಿ. ಅಕ್ಕಿ ಉಚಿತ ಎಂದು ತಿಳಿಸಿದರು. <br /><br />ಕಾಂಗ್ರೆಸ್ ಪಕ್ಷದ ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಅಕ್ಷರದಾಸೋಹ ಯೋಜನೆಗಳು ಈಗಲೂ ಜಾರಿಯಲ್ಲಿವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಜನರು ಮಾಡಬೇಕು ಎಂದರು.<br /><br />ಈ ಭಾಗದ ಕಾಡಾನೆ ಸಮಸ್ಯೆ, ಹೇಮಾವತಿ ಸಂತ್ರಸ್ತರ ಬವಣೆಗಳು ಪಕ್ಷಕ್ಕೆ ತಿಳಿದಿವೆ. ಅದೆಲ್ಲವನ್ನೂ ಪರಿಹರಿಸಲು ಪಕ್ಷ ಬದ್ಧವಾಗಿದೆ ಎಂದರು. <br /><br />ಇದಕ್ಕೂ ಮೊದಲು ಬಸ್ನಲ್ಲಿ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಮೋಟಮ್ಮ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು.</p>.<p><strong>ಇವನ್ನೂ ಓದಿ... </strong></p>.<p>* <a href="https://www.prajavani.net/district/mysuru/congress-mla-tanveer-sait-announced-political-retirement-for-karnataka-assembly-election-2023-1019382.html" target="_blank">ಚುನಾವಣಾ ರಾಜಕೀಯದಿಂದ ನಿವೃತ್ತಿ: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಘೋಷಣೆ</a></p>.<p>* <a href="https://www.prajavani.net/karnataka-news/karnataka-assembly-election-2023-nagamangala-jds-mla-suresh-gowda-bjp-politics-1019389.html" target="_blank">ಜಾತ್ರೆಯಲ್ಲಿ ಅಶ್ಲೀಲ ನೃತ್ಯ: ಜೆಡಿಎಸ್ ಶಾಸಕ ಸುರೇಶ್ ಗೌಡ ವಿರುದ್ಧ ಬಿಜೆಪಿ ಕಿಡಿ</a></p>.<p>* <a href="https://www.prajavani.net/karnataka-news/karnataka-assembly-election-2023-narendra-modi-basavaraj-bommai-bjp-congress-politics-1019380.html" target="_blank">ಚುನಾವಣೆಯಿಂದಾಗಿ ಮೋದಿಗೆ ಕರ್ನಾಟಕ, ಬಿಎಸ್ವೈ ನೆನಪಾಗಿದೆ: ಕಾಂಗ್ರೆಸ್ ವ್ಯಂಗ್ಯ</a></p>.<p>*<a href="https://www.prajavani.net/district/hasana/karnataka-assembly-election-2023-hassan-constituency-hd-kumaraswamy-hd-revanna-cm-ibrahim-jds-1019388.html" target="_blank"> ಹಾಸನ ಕ್ಷೇತ್ರದ ಟಿಕೆಟ್ ವಿಚಾರ: ಯಾವ ಸಭೆಯನ್ನೂ ಕರೆದಿಲ್ಲ ಎಂದ ಸಿ.ಎಂ. ಇಬ್ರಾಹಿಂ</a></p>.<p>* <a href="https://www.prajavani.net/district/uttara-kannada/karnataka-assembly-election-2023-siddaramaiah-basavaraj-bommai-congress-bjp-flex-banner-politics-1019398.html" target="_blank">ಶಿರಸಿ: ಸಿ.ಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಬ್ಯಾನರ್</a></p>.<p>* <a href="https://www.prajavani.net/district/uttara-kannada/banavasi-kadambotsava-2023-basavaraj-bommai-shivaram-hebbar-bjp-congress-politics-1019401.html" target="_blank">ಬನಾವಸಿ ಕದಂಬೋತ್ಸವ: ಬಿಜೆಪಿ ಬಾವುಟ, ಕಮಲದ ಚಿಹ್ನೆಯ ಟೀಶರ್ಟ್ಗೆ ಕಾಂಗ್ರೆಸ್ ಆಕ್ಷೇಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>