<p>ಹಾಸನ: ಸಾಹಿತಿ, ನಾಟಕಕಾರಬೇಲೂರು ಕೃಷ್ಣಮೂರ್ತಿ (89) ಮಂಗಳವಾರ ಬೆಳಿಗ್ಗೆ ನಿಧನರಾದರು.</p>.<p>ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು, ನಗರದ ಸಂಜೀವಿನಿ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟರು.</p>.<p>ಕೃಷ್ಣಮೂರ್ತಿ ಅವರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ.</p>.<p>ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಬೇಲೂರಿಗೆ ಕೊಂಡೊಯ್ದು ವಿಧಿವಿಧಾನ ಪೂರ್ಣಗೊಳಿಸಿ, ಪೂರ್ವನಿಗದಿಯಂತೆ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಮೃತದೇಹವನ್ನು ದಾನ ಮಾಡಲಾಯಿತು.</p>.<p>ಅಖಿಲ ಕರ್ನಾಟಕ ನಾಟಕಕಾರರ ಸಂಘದ ಅಧ್ಯಕ್ಷರಾಗಿ, ಬೆಂಗಳೂರು ರಂಗಕರ್ಮಿಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಹಾಗೂ ಭಾರತ ಸೇವಾದಳದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.</p>.<p>‘ಭಂಡಬಾಳು’, ‘ಅಸಲಿ ನಕಲಿ’, ‘ಆಹುತಿ’, ‘ಸೇವೆ‘, ‘ಬಲಿ’, ‘ಜ್ವಾಲೆ’ ಕೃಷ್ಣಮೂರ್ತಿ ಅವರ ಪ್ರಮುಖ ನಾಟಕ<br />ಗಳು. ಇವರ 100 ನಾಟಕಗಳನ್ನೊಳಗೊಂಡ, 11 ಪುಸ್ತಕಗಳು ಪ್ರಕಟವಾಗಿವೆ.</p>.<p>‘ದಾಹ’, ‘ಪುತ್ರ ವಾತ್ಸಲ್ಯ’, ‘ನಿಗೂಢ’, ‘ಬೆಟ್ಟ ಬೈರಾಗಿ’, ‘ಪುನರ್ಜನ್ಮ’, ‘ನಗೆಗಡಲು’, ‘ಬುರುಡೆ’ ಹಾಗೂ ‘ವಿಷ್ಣುವರ್ಧನ’ ಇವರ ಪ್ರಮುಖ ಕಾದಂಬರಿಗಳು.</p>.<p>ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬುದ್ಧ ಶಾಂತಿ ಪ್ರಶಸ್ತಿ, ಆರ್ಯಭಟ, ಸುವರ್ಣ ಕನ್ನಡಿಗ, ಸಾಹಿತ್ಯ ಶ್ರೀ, ನಾಟಕ ಶ್ರೀ ಸೇರಿದಂತೆ ಹಲವು ಸಮ್ಮಾನಗಳು ಅವರಿಗೆ ಸಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಸಾಹಿತಿ, ನಾಟಕಕಾರಬೇಲೂರು ಕೃಷ್ಣಮೂರ್ತಿ (89) ಮಂಗಳವಾರ ಬೆಳಿಗ್ಗೆ ನಿಧನರಾದರು.</p>.<p>ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು, ನಗರದ ಸಂಜೀವಿನಿ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟರು.</p>.<p>ಕೃಷ್ಣಮೂರ್ತಿ ಅವರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ.</p>.<p>ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಬೇಲೂರಿಗೆ ಕೊಂಡೊಯ್ದು ವಿಧಿವಿಧಾನ ಪೂರ್ಣಗೊಳಿಸಿ, ಪೂರ್ವನಿಗದಿಯಂತೆ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಮೃತದೇಹವನ್ನು ದಾನ ಮಾಡಲಾಯಿತು.</p>.<p>ಅಖಿಲ ಕರ್ನಾಟಕ ನಾಟಕಕಾರರ ಸಂಘದ ಅಧ್ಯಕ್ಷರಾಗಿ, ಬೆಂಗಳೂರು ರಂಗಕರ್ಮಿಗಳ ಒಕ್ಕೂಟದ ಗೌರವಾಧ್ಯಕ್ಷರಾಗಿ ಹಾಗೂ ಭಾರತ ಸೇವಾದಳದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.</p>.<p>‘ಭಂಡಬಾಳು’, ‘ಅಸಲಿ ನಕಲಿ’, ‘ಆಹುತಿ’, ‘ಸೇವೆ‘, ‘ಬಲಿ’, ‘ಜ್ವಾಲೆ’ ಕೃಷ್ಣಮೂರ್ತಿ ಅವರ ಪ್ರಮುಖ ನಾಟಕ<br />ಗಳು. ಇವರ 100 ನಾಟಕಗಳನ್ನೊಳಗೊಂಡ, 11 ಪುಸ್ತಕಗಳು ಪ್ರಕಟವಾಗಿವೆ.</p>.<p>‘ದಾಹ’, ‘ಪುತ್ರ ವಾತ್ಸಲ್ಯ’, ‘ನಿಗೂಢ’, ‘ಬೆಟ್ಟ ಬೈರಾಗಿ’, ‘ಪುನರ್ಜನ್ಮ’, ‘ನಗೆಗಡಲು’, ‘ಬುರುಡೆ’ ಹಾಗೂ ‘ವಿಷ್ಣುವರ್ಧನ’ ಇವರ ಪ್ರಮುಖ ಕಾದಂಬರಿಗಳು.</p>.<p>ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬುದ್ಧ ಶಾಂತಿ ಪ್ರಶಸ್ತಿ, ಆರ್ಯಭಟ, ಸುವರ್ಣ ಕನ್ನಡಿಗ, ಸಾಹಿತ್ಯ ಶ್ರೀ, ನಾಟಕ ಶ್ರೀ ಸೇರಿದಂತೆ ಹಲವು ಸಮ್ಮಾನಗಳು ಅವರಿಗೆ ಸಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>